ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಸೆಟ್‌ ಬಂದಿಲ್ಲ- ಪೊಲೀಸ್‌ ; ಓಲೆ ಬಂದಿದೆ- ಸನ್‌ ಟೀವಿ

By Staff
|
Google Oneindia Kannada News

ಬೆಂಗಳೂರು : ಮಾಜಿ ಸಚಿವ ನಾಗಪ್ಪ ಅವರನ್ನು ಭಾನುವಾರ ರಾತ್ರಿ ಅಪಹರಿಸಿ 15 ಗಂಟೆಗಳು ಕಳೆದರೂ ಪೊಲೀಸರಿಗಾಗಲೀ, ನಾಗಪ್ಪ ಅವರ ಕುಟುಂಬಕ್ಕಾಗಲೀ ವೀರಪ್ಪನ್‌ನಿಂದ ಯಾವುದೇ ಸಂದೇಶ ಬಂದಿಲ್ಲ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ನರಹಂತಕ ವೀರಪ್ಪನ್‌ ವಿರುದ್ಧದ ಕಾರ್ಯಾಚಾರಣೆಯನ್ನು ಚುರುಕುಗೊಳಿಸಲು ಎಸ್‌ಟಿಎಫ್‌ ಜೊತೆಗೆ ವಿಶೇಷ ಪೊಲೀಸ್‌ ದಳವೂ ಕೈಜೋಡಿಸಿದೆ. ಕೊಳ್ಳೇಗಾಲ ಬಳಿಯ ಹಳ್ಳಿ ಕಾಮಗೆರೆಯಲ್ಲಿ ಉದ್ರಿಕ್ತ ಪರಿಸ್ಥಿತಿ ಉಂಟಾಗಿದ್ದು, ಸಾರ್ವಜನಿಕರು ನಾಗಪ್ಪ ಅವರ ಅಪಹರಣದ ಕುರಿತು ಪ್ರತಿಭಟನೆಯನ್ನು ಮುಂದುವರೆಸಿದ್ದಾರೆ. ಕಾಮಗೆರೆಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತು ಮಾಡಲಾಗಿದೆ.

ಈ ನಡುವೆ ಡಿಜಿಪಿ ವಿ.ವಿ. ಭಾಸ್ಕರ್‌ ಮತ್ತು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಸುಭಾಷ್‌ ಭರಣಿ ಚಾಮರಾಜ ನಗರಕ್ಕೆ ಧಾವಿಸಿದ್ದಾರೆ.

ಒಂದು ವರ್ಷದ ಹಿಂದೆ ಪತ್ರವೊಂದನ್ನು ಬರೆದು, ಅಪಹರಿಸುವುದಾಗಿ ನಾಗಪ್ಪ ಅವರನ್ನು ವೀರಪ್ಪನ್‌ ಬೆದರಿಸಿದ್ದ. ಭಾನುವಾರ ರಾತ್ರಿ ವರನಟ ರಾಜ್‌ಕುಮಾರ್‌ ಗಾಜನೂರಿಗೆ ತೆರಳಿದ್ದು, ಪೊಲೀಸರೆಲ್ಲ ರಾಜ್‌ಕುಮಾರ್‌ ಕಡೆಗೆ ಗಮನ ಹರಿಸಿದ್ದರು. ಈ ಪರಿಸ್ಥಿತಿಯನ್ನು ವೀರಪ್ಪನ್‌ ದುರುಪಯೋಗ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಸನ್‌ ಟೀವಿ ವರದಿ
ಎಸ್‌ಟಿಎಫ್‌ ಪೊಲೀಸರಿಗೆ ವೀರಪ್ಪನ್‌ ಕಡೆಯವರಿಂದ ಪತ್ರ ಹಾಗೂ ಸಿ.ಡಿ. ಬಂದಿರುವುದಾಗಿ ಸನ್‌ ಟೀವಿ ವರದಿ ಮಾಡಿದೆ. ಪೊಲೀಸರು ಈ ವರದಿಯನ್ನು ದೃಢೀಕರಿಸಿಲ್ಲ .

(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X