ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ, ನೆಡುಮಾರನ್‌... ಏನೇನು ಕೇಳಬಹುದು ವೀರಪ್ಪನ್‌ ?

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

ಲೆಕ್ಕಾಚಾರಗಳೆಲ್ಲಾ ಹುಸಿಯಾಗಿವೆ.

ಒಂದೇ ಬಂದೂಕು, ಐದೇ ಮಂದಿ ಸಹಚರರು ಎಂಬೆಲ್ಲಾ ಎಸ್‌ಟಿಎಫ್‌ ವರದಿಗಳು ಠುಸ್ಸು. ವೀರಪ್ಪನ್‌ ಅಂದುಕೊಂಡಷ್ಟು ಅಬಲನಾಗೇನೂ ಇಲ್ಲ. ಕಣ್ಣಿನ ಪೊರೆ ಅವನನ್ನು ಕಾಡುವಷ್ಟೇನೂ ಬೆಳೆದಿಲ್ಲ. ಹಾಗೆ ಬೆಳೆದರೂ ಅದನ್ನು ಆಪರೇಟ್‌ ಮಾಡಿಸುವಷ್ಟು ಚಾಕಚಕ್ಯತೆ ಆತನಲ್ಲಿದೆ.

ಎಸ್‌ಟಿಎಫ್‌ ವೈಫಲ್ಯ ಕುರಿತ ಪಟಪಟ ಚರ್ಚೆಯ ನಡುವೆ ಈಗ ಎದ್ದಿರುವ ಪ್ರಶ್ನೆ- ವೀರಪ್ಪನ್‌ ಈಗ ಮುಂದಿಡಬಹುದಾದ ಬೇಡಿಕೆಗಳೇನು ಎಂಬುದು.

ಪರಿಹಾರವೇ ಮರೀಚಿಕೆ ಎಂಬಂತಾಗಿರುವ ಕಾವೇರಿ ನದಿ ನೀರು ಹಂಚಿಕೆ ಸಮಸ್ಯೆ ಈಗ ಕಾವೇರಿದೆ. ಇನ್ನು ಪೋಟಾ ಅಡಿಯಲ್ಲಿ ಜಯಲಲಿತಾ ಹುಕುಂ ಜೋರಾಗಿದೆ. ತಮಿಳು ರಾಷ್ಟ್ರೀಯ ಚಳವಳಿ ನಾಯಕರಾದ ಪಳ ನೆಡುಮಾರನ್‌, ಸುಬ ವೀರಪಾಂಡಿಯನ್‌ನಂಥಾ ಘಟಾನುಘಟಿಗಳೇ ಕಂಬಿ ಎಣಿಸುತ್ತಿದ್ದಾರೆ. ಘರ್ಜಿಸಿದ ಎಲ್ಟಿಟಿಇ ಹುಲಿಗಳ ಬೋನಿಗೆ ಹಾಕುವ ಕೆಲಸ ತಮಿಳುನಾಡಲ್ಲಿ ಭಾರೀ ಚುರುಕಾಗಿದೆ. ಇಂಥಾ ಸನ್ನಿವೇಶದಲ್ಲಿ ಮಾಜಿ ಸಚಿವ ನಾಗಪ್ಪನನ್ನು ವೀರಪ್ಪನ್‌ ಹೊತ್ತುಕೊಂಡು ಹೋಗಿದ್ದಾನೆ. ಈ ಅಪಹರಣದ ಹಿಂದೆ ಸಹಜವಾಗೇ ಪ್ರಸ್ತುತ ಸಮಸ್ಯೆಗಳ ಆಜೂಬಾಜಿನಲ್ಲೇ ವೀರಪ್ಪನ್‌ ಬೇಡಿಕೆಗಳೂ ಇರಬಹುದು.

ಕರ್ನಾಟಕದಲ್ಲಿ ತಿರುವಳ್ಳುವಾರ್‌ ಪ್ರತಿಮೆ ಸ್ಥಾಪನೆ, ತಮಿಳುನಾಡಿಗೆ ಕಾವೇರಿ ನೀರು ಸರಬರ ಹರಿದು ಬರಬೇಕು, ತನ್ನ ಬಂಧಿತ ಸಹಚರರನ್ನು ಬಿಡುಗಡೆ ಮಾಡಬೇಕು, ತನಗೆ ಸಾರ್ವತ್ರಿಕ ಕ್ಷಮಾದಾನ ನೀಡಬೇಕು, ಎಸ್‌ಟಿಎಫ್‌ ಕಾರ್ಯಾಚರಣೆಯನ್ನು ಹಿಂದಕ್ಕೆ ಪಡೆಯಬೇಕು- ಈ ಹಳೆಯ ಬೇಡಿಕೆಗಳಿಗೆ ಬೆರೆಯಬಹುದಾದ ಸಂಭವನೀಯ ಹೊಸ ಬೇಡಿಕೆಗಳನ್ನು ಪಟ್ಟಿ ಮಾಡುವುದಾದರೆ-

  • ತಮಿಳು ರಾಷ್ಟ್ರೀಯ ನಾಯಕರಾದ ನೆಡುಮಾರನ್‌ ಮತ್ತು ಕೊಳತ್ತೂರು ಮಣಿಯನ್ನು ಬಿಡುಗಡೆ ಮಾಡಬೇಕು.
  • ನಕ್ಕೀರನ್‌ ಪತ್ರಿಕೆಯ ವರದಿಗಾರ ಶಿವಸುಬ್ರಮಣ್ಯಂನನ್ನು ಬಿಡುಗಡೆ ಮಾಡಬೇಕು.
  • ಪೋಟಾ ಅಡಿ ಬಂಧಿಸಲಾಗಿರುವವರನ್ನು ಬಿಡಬೇಕು.
  • ತಮಿಳು ಚಳವಳಿ ಸಂಘಟನೆಗಳ ಮೇಲೆ ಹೇರಿರುವ ನಿಷೇಧವನ್ನು ವಾಪಸ್ಸು ಪಡೆಯಬೇಕು...
ಕಾವೇರಿ ಸಮಸ್ಯೆಗೆ ಪರಿಹಾರದ ಕುರಿತು ಚರ್ಚಿಸಲು ಪ್ರಧಾನಿ ವಾಜಪೇಯಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳನ್ನು ಆಗಸ್ಟ್‌ 27ರಂದು ಸಭೆ ಕರೆದಿದ್ದಾರೆ. ಸಹಜವಾಗೇ ಬತ್ತಿ ಹೋಗಿರುವ ತಮಿಳುನಾಡಿನ ಜಲಾಶಯಗಳಿಗೆ ನೀರು ಹರಿಸಿ ಎಂಬ ಸಲಹೆ ಕರ್ನಾಟಕಕ್ಕೆ ಅವರಿಂದ ಬರಲಿದೆ. ಈಗ ಕರ್ನಾಟಕದ ಮಾಜಿ ಸಚಿವರ ಅಪಹರಣವಾಗಿರುವುದರಿಂದ ಈ ಚರ್ಚೆಗೆ ಹೊಸ ಆಯಾಮ ಸಿಗುವ ನಿರೀಕ್ಷೆಯಿದೆ.

ಸಂಧಾನಕ್ಕೆ ತೆರಳುವವರಾರು?
ರಾಜ್‌ ಅಪಹರಣದ ನಂತರ ಸಾಕಷ್ಟು ವಿವಾದದಲ್ಲಿ ಮಿಂದಿರುವ ನಕ್ಕೀರನ್‌ ಪತ್ರಿಕೆ ಸಂಪಾದಕ ಗೋಪಾಲ್‌ಗೇ ಸರ್ಕಾರಗಳು ಮತ್ತೆ ಶರಣು ಹೋಗುತ್ತವೆಯೇ? ಇದಕ್ಕೆ ಗೋಪಾಲ್‌ ಏನನ್ನುತ್ತಾರೆ? ಇನ್ನು, ನೆಡುಮಾರನ್‌ ಜೈಲಿನ ಸಲಾಕೆಗಳ ಹಿಂದಿರುವುದರಿಂದ ಅವರನ್ನು ಕಳಿಸುವ ಮಾತು ದೂರ. ಹಾಗಾದರೆ ಈ ಬಾರಿ ಸರ್ಕಾರದ ಸಂಧಾನಕಾರರಾರು?

ನೀವೇ ಅಂದಾಜು ಮಾಡಿ.

ವಾರ್ತಾ ಸಂಚಯ
ಕೆಸೆಟ್‌ ಬಂದಿಲ್ಲ- ಪೊಲೀಸ್‌ ; ಓಲೆ ಬಂದಿದೆ- ಸನ್‌ ಟೀವಿ
ಪೊಲೀಸ್‌ ಕಾರ್ಯಾಚರಣೆಯ ವೈಫಲ್ಯವನ್ನು ಒಪ್ಪಿಕೊಂಡ ಶ್ರೀನಿವಾಸಲು
ವೀರಪ್ಪನ್‌ನಿಂದ ಮಾಜಿ ಸಚಿವರ ಅಪಹರಣ, ಕೊಳ್ಳೇಗಾಲ ಬಂದ್‌

ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X