ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಉದ್ದೀಪನ ಮದ್ದು ಸೇವನೆ: ಪುತ್ತೂರು ಸತೀಶ್ ರೈಯಿಂದ ಪದಕ ವಾಪಾಸ್
ಲಂಡನ್: ಇಂಗ್ಲೆಂಡ್ನ ಮ್ಯಾಂಚೆಸ್ಟರ್ನಲ್ಲಿ ಇತ್ತೀಚೆಗೆ ನಡೆದ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ಎರಡು ಚಿನ್ನ ಹಾಗೂ ಒಂದು ಕಂಚಿನ ಪದಕ ಗೆದ್ದು ದೇಶದಾದ್ಯಂತ ಸಂಭ್ರಮ ಮೂಡಿಸಿದ ಕನ್ನಡಿಗ, ವೈಟ್ ಲಿಫ್ಟರ್ ಸತೀಶ್ ರೈ ಉದ್ದೀಪನ ಮದ್ದು ಸೇವಿಸಿರುವುದು ದೃಢಪಟ್ಟಿದ್ದು ಅವರು ಗೆದ್ದ ಎಲ್ಲ ಪದಕಗಳನ್ನು ವಾಪಾಸು ಮಾಡಬೇಕಾಗಿದೆ.
ಇದರಿಂದ ಕಾಮನ್ವೆಲ್ತ್ ಕ್ರೀಡಾ ಕೂಟದಲ್ಲಿ ಒಟ್ಟು 32 ಚಿನ್ನದ ಪದಕ ಪಡೆದು ಮೂರನೇ ಸ್ಥಾನಕ್ಕೇರಿ ಬೀಗುತ್ತಿದ್ದ ಭಾರತಕ್ಕೆ ತೀರಾ ಅವಮಾನವಾದಂತಾಗಿದೆ. ಪದಕಗಳ ಪಟ್ಟಿಯಲ್ಲಿ ಬರೀ 30 ಚಿನ್ನದ ಪದಕಗಳನ್ನು ಪಡೆದಿರುವ ಭಾರತ ಈಗ ನಾಲ್ಕನೇ ಸ್ಥಾನಕ್ಕೆ ಜಾರಿದೆ.
ಸತೀಶ್ ರೈ ಎಸಗಿರುವ ಅಪರಾಧದಿಂದಾಗಿ ಭಾರತ ಪಡೆದಿರುವ ಪದಕಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದರಿಂದ ಮೂರನೇ ಸ್ಥಾನವೇರಿದ ಹೆಮ್ಮೆ ಕೆನಡಾ ದೇಶಕ್ಕೆ ಸಲ್ಲುತ್ತದೆ.
(ಇನ್ಫೋ
ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Friday, August 23, 2002, 0:00 [IST]