ಮಳೆರಾಯನ ಅವಕೃಪೆಯಿಂದ ರಾಜ್ಯದಲ್ಲಿ ಮತ್ತೆ ಲೋಡ್ ಶೆಡ್ಡಿಂಗ್
ಬೆಂಗಳೂರು : ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಸಾಕಷ್ಟು ಮಳೆ ಬೀಳದ ಕಾರಣ ರಾಜ್ಯದ ಪ್ರಮುಖ ಜಲಾಶಯಗಳು ಸೊರಗಿದ್ದು ವಿದ್ಯುತ್ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರಿದೆ.
ಬೆಂಗಳೂರು ನಗರ ಸೇರಿದಂತೆ ರಾಜ್ಯಾದ್ಯಂತ ಗುರುವಾರ ರಾತ್ರಿಯಿಂದಲೇ ಅನಿಯಮಿತ ಲೋಡ್ ಶೆಡ್ಡಿಂಗ್ ಜಾರಿಗೊಳಿಸಲಾಗಿದ್ದು, ಗೃಹ ಹಾಗೂ ವಾಣಿಜ್ಯವಲಯದ ವಿದ್ಯುತ್ ಬಳಕೆದಾರರಿಗೂ ಲೋಡ್ಶೆಡ್ಡಿಂಗ್ನಿಂದ ಶಾಕ್ ತಟ್ಟಲಿದೆ.
ಕಳೆದ ವರ್ಷಕ್ಕೆ ಹೋಲಿಸಿದರೆ ಜಲ ವಿದ್ಯುತ್ಗಳಿರುವ ಪ್ರದೇಶಗಳಲ್ಲಿ ಯಥೇಷ್ಟ ಮಳೆಯಾಗಿಲ್ಲ. ಜಲಾಶಯಗಳು ತುಂಬಿ ಹರಿಯದೇ ಇರುವಾಗ ವಿದ್ಯುತ್ ಉತ್ಪಾದನೆ ದುಃಸ್ಸಾಧ್ಯ. ಆದ್ದರಿಂದ ಲೋಡ್ ಶೆಡ್ಡಿಂಗ್ ಅನಿವಾರ್ಯವಾಗಿದೆ ಎಂದು ಕೆಪಿಟಿಸಿಎಲ್ ಅಧಿಕಾರಿಗಳು ಹೇಳುತ್ತಾರೆ.
ಮುಂದಿನ ಬೇಸಿಗೆ ಹೊತ್ತಿಗೆ ವಿದ್ಯುತ್ ಪೂರೈಕೆಯಲ್ಲಿ ಗಂಭೀರ ವ್ಯತ್ಯಯ ಆಗದ ಹಾಗೆ ಎಚ್ಚರಿಕೆ ವಹಿಸಲಾಗುತ್ತಿದೆ. ಆದರೆ ಈಗ ಹೇರಲಾಗಿರುವ ಲೋಡ್ ಶೆಡ್ಡಿಂಗ್ ಅವಧಿ ಎಷ್ಟು ದಿನ ಮುಂದುವರೆಯುತ್ತದೆ ಎಂಬುದು ತಿಳಿದುಬಂದಿಲ್ಲ. ಅಂದರೆ, ರಾಜ್ಯದ ವಿದ್ಯುತ್ ಪರಿಸ್ಥಿತಿ ಮಳೆರಾಯನ ಕೃಪೆಯನ್ನು ಅವಲಂಬಿಸಿದೆ.
(ಇನ್ಫೋ
ವಾರ್ತೆ)
ಮುಖಪುಟ
/
ಇವತ್ತು...
ಈ
ಹೊತ್ತು...