ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾರಿ ಮುಷ್ಕರ ಹಿಂದಕ್ಕೆ, ನಿತ್ಯಕರ್ಮಿಗಳಿಗೆ ನೆಮ್ಮದಿಯ ನಿಟ್ಟುಸಿರು

By Staff
|
Google Oneindia Kannada News

ಬೆಂಗಳೂರು : ಲಾರಿ ಮಾಲಿಕರ ಬೇಡಿಕೆಗಳನ್ನು ಈಡೇರಿಸುವುದಾಗಿ ಸರ್ಕಾರ ಭರವಸೆ ಕೊಟ್ಟಿರುವ ಹಿನ್ನೆಲೆಯಲ್ಲಿ 21 ದಿನಗಳಿಂದ ನಡೆಯುತ್ತಿದ್ದ ಲಾರಿ ಮುಷ್ಕರಕ್ಕೆ ತೆರೆ ಬಿದ್ದಿದೆ.

ಬುಧವಾರ ಗಣಿ ಸಚಿವ ವಿ.ಮುನಿಯಪ್ಪ ಅವರ ಜೊತೆ ಚರ್ಚೆ ನಡೆಸಿದ ನಂತರ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಬಿ.ಚನ್ನರೆಡ್ಡಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ಮರಳನ್ನು ಹೊತ್ತು ಸಾಗಲು ಒಂದು ತಿಂಗಳ ಅವಧಿಯ ತಾತ್ಕಾಲಿಕ ಅನುಮತಿಯನ್ನು ಲಾರಿಗಳಿಗೆ ಸರ್ಕಾರ ಕೊಟ್ಟಿದೆ.

ರೈತರು, ಕೂಲಿ ಕಾರ್ಮಿಕರು ಹಾಗೂ ಅಂತರ್ಜಲದ ಹಿತದೃಷ್ಟಿಯಲ್ಲಿ ಸರ್ಕಾರ ಹೆಜ್ಜೆ ಇಡಬೇಕಿದೆ. ಬೇಕಾಬಿಟ್ಟಿ ಮರಳನ್ನು ತೆಗೆದರೆ ಪರಿಸರ ಮುನಿಸು ಮಾಡಿಕೊಳ್ಳುತ್ತದೆ. ಹಾಗಾಗಿ ಸರ್ಕಾರ ಗೊತ್ತು ಪಡಿಸಿರುವ ಜಾಗೆಗಳಿಂದ ಮಾತ್ರ ಮರಳನ್ನು ತೆಗೆಯುವಂತೆ ಸೂಚಿಸಿದ್ದೇವೆ. ಮರಳು ತೆಗೆಯಲು ಒಂದು ಮೀಟರ್‌ಗಿಂತ ಹೆಚ್ಚು ಆಳ ಅಗೆಯಬಾರದು. ಮರಳು ಗುಂಡಿಗಳ ಗುತ್ತಿಗೆ ಹಂಚುವಿಕೆಯ ಅವಧಿ 1 ವರ್ಷ ಮಾತ್ರ ಇರಲಿದ್ದು, ಈ ಪ್ರಕ್ರಿಯೆ ನೋಡಿಕೊಳ್ಳಲು ಆಯಾ ತಾಲ್ಲೂಕಿನ ತಹಸೀಲ್ದಾರ್‌ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅಕ್ರಮ ಮರಳು ಸಾಗಣೆಯಿಂದ ರಾಜ್ಯದ ಬೊಕ್ಕಸಕ್ಕೆ 20ರಿಂದ 25 ಕೋಟಿ ಲುಕ್ಸಾನಾಗುತ್ತಿದೆ ಎಂದು ಸಚಿವ ಮುನಿಯಪ್ಪ ಹೇಳಿದರು.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X