551ರು. ಹರಾಜಿಗೆ ಬಿಕರಿಯಾದ ಹುಡುಗಿ ತಂತಾನೇ ಕೊಂದುಕೊಂಡಳು!
ರಾಯಪುರ : ನೂರು ರುಪಾಯಿ ಒಂದು ಸಲ... 120 ರುಪಾಯಿ ಎರಡು ಸಲ... 300 ರುಪಾಯಿ.. 550... 551. ಅಲ್ಲಿಗೆ ಚತ್ತೀಸಗಢದ ರಾಯಪುರದ ತಾಂಡಾ ಹುಡುಗಿ ಕೇಸರಿ ಹರಾಜು ಮುಗಿಯಿತು. ಇನ್ನೂರು ಜನರ ಸಮ್ಮುಖದಲ್ಲಿ ಅವಳನ್ನು ಕೊಂಡ ಖುಷಿಯಲ್ಲಿ ಬಾಬುಲಾಲ್ ಬೀಗಿದ. ಕೆಲವೇ ಗಂಟೆಗಳಲ್ಲಿ ಕೇಸರಿ ವಿಷ ಸೇವಿಸಿ ಹೆಣವಾದಳು !
ಈ ತಾಂಡಾದ ಜನರಿಗೆ ಇದು ಅಪರಾಧ ಅಂತ ಎಂದಿಗೂ ಅನಿಸೇ ಇಲ್ಲ. ಕೇಸರಿಯನ್ನು ಹೆತ್ತವರ ದುಃಖಕ್ಕೆ ಎಣೆಯೇ ಇಲ್ಲ. ಗೋಂಡ್ ಪಂಗಡದ ಈ ವಿಚಿತ್ರ ಪದ್ಧತಿ ಬಾಳಿ ಬದುಕಬೇಕಾದ ಹೆಣ್ಣು ಮಕ್ಕಳನ್ನು ಬಲಿ ತೆಗೆದುಕೊಳ್ಳುತ್ತಿದೆ. ಅಂದಹಾಗೆ, ಈ ಘಟನೆ ಪೊಲೀಸರ ಗಮನಕ್ಕೆ ಬಂದಿರುವುದು 20 ದಿನಗಳ ನಂತರ. ಕೇಸರಿ ಸತ್ತಿದ್ದು ಜುಲೈ 23ರಂದು.
ಏನೀ
ಸಂಪ್ರದಾಯ?
ಮದುವೆಗೆ
ಮುಂಚೆ
ಪ್ರೀತಿಸಿದ
ಹುಡುಗನ
ತೋಳ
ತೆಕ್ಕೆಯಲ್ಲಿ
ಹುಡುಗಿ
ಏನಾದರೂ
ಸಿಕ್ಕಿ
ಬಿದ್ದಲ್ಲಿ-
ಒಂದೋ
ಆ
ಹುಡುಗನ
ಜೊತೆ
ಮದುವೆಯಾಗಬೇಕು.
ಹುಡುಗ
ಒಪ್ಪದಿದ್ದರೆ
ಆದಿವಾಸಿಗಳ
ಮಹಾಸಭಾದ
ಸಮ್ಮುಖದಲ್ಲಿ
ಹರಾಜಿಗೆ
ಒಳಪಡಬೇಕು.
ಅದೇ
ತಾಂಡಾದ
ಹೆಚ್ಚು
ಹರಾಜು
ಕೂಗುವಾತನಿಗೆ
ಹುಡುಗಿ
ದಕ್ಕುತ್ತಾಳೆ.
ಆಮೇಲೆ
ಅವರಿಬ್ಬರ
ವಿವಾಹ.
ಕೈಕೊಟ್ಟ
ಭಾರೂ
ಕೇಸರಿ
ಮಾಡಿದ
ತಪ್ಪು
ಭಾರೂ
ಎಂಬಾತನನ್ನು
ಪ್ರೀತಿಸಿದ್ದಳು.
ಸದಾ
ಅಮಲಿನಲ್ಲೇ
ತೇಲುತ್ತಿದ್ದ
ಭಾರೂ
ಅಂಗಡಿಯಿಟ್ಟುಕೊಂಡಿದ್ದ.
ದಾರೂ
ಅಮಲಿನ
ಭಾರೂ
ಮತ್ತು
ಪ್ರೀತಿಯ
ಅಮಲಿನ
ಕೇಸರಿ
ಅಪ್ಪಿಕೊಂಡಿದ್ದಾಗ
ಊರವರಿಗೆ
ಸಿಕ್ಕಿ
ಬಿದ್ದರು.
ಪಂಚಾಯಿತಿ
ನಡೆಯಿತು.
‘ದಾರೂ
ಅಮಲಿನಲ್ಲಿ
ನಾನು
ಹಾಗೆ
ಮಾಡಿರಬೇಕು.
ಕೇಸರಿಯನ್ನು
ಮದುವೆ
ಆಗುವುದಿಲ್ಲ’
ಎಂದು
ಭಾರೂ
ಕಡ್ಡಿ
ತುಂಡುಮಾಡಿದಂತೆ
ಹೇಳಿಬಿಟ್ಟ.
ಹರಾಜಿಗೆ ಪ್ರತಿರೋಧ ಒಡ್ಡುವ ಸ್ಥಿತಿಯಲ್ಲಿ ಕೇಸರಿ ಇರಲಿಲ್ಲ. ಮಹಾಸಭೆಯ ಮುಖ್ಯಸ್ಥ ಕಮಲ ವಟ್ಟಿ ಸಮ್ಮುಖದಲ್ಲಿ ಹರಾಜು ನಡೆದೇಹೋಯಿತು. ಕೇಸರಿ ಯಾರಿಗೂ ದಕ್ಕಲಿಲ್ಲ. ಬಾಬುಲಾಲ್ ಪೊಲೀಸರಿಗೆ ಸಿಕ್ಕಿ, ನಡೆದುದನ್ನು ಹೇಳಿದ.
ಈಗ ಠಾಣೆಯ ಆರೋಪ ಪಟ್ಟಿಯಲ್ಲಿ ದಾಖಲಾಗಿರುವುದು ಇದೊಂದು ಆತ್ಮಹತ್ಯೆ ಎಂದು. ಕಮಲ ವಟ್ಟಿ ಪಂಚಾಯಿತಿ ಕಟ್ಟೆ ಮೇಲೆ ಈಗಲೂ ಹಾಗೇ ಕೂತಿದ್ದಾರೆ ! ಸರ್ಕಾರಕ್ಕೆ ಇವೆಲ್ಲಾ ಗೊತ್ತೇ ಆಗುತ್ತಿಲ್ಲವೇ? ಇಂಥಾ ವಿಚಿತ್ರ ಸಂಪ್ರದಾಯಗಳಿಗೆ ನೀವೇನಂತೀರಿ?
(ಇನ್ಫೋ
ವಾರ್ತೆ)
ಮುಖಪುಟ
/
ಇವತ್ತು...
ಈ
ಹೊತ್ತು...