‘ನೀನಾಸಂ ಸಂಸ್ಕೃತಿ ಶಿಬಿರ-2002’ ದಲ್ಲಿ ನೀವು ಭಾಗವಹಿಸಬೇಕೆ?
ಬೆಂಗಳೂರು : ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಸೃಜನಶೀಲ ಕೆ.ವಿ.ಸುಬ್ಬಣ್ಣ ಅವರ ನೇತೃತ್ವದ ಹೆಗ್ಗೋಡಿನ ‘ನೀನಾಸಂ’ ಅಕ್ಟೋಬರ್ ತಿಂಗಳಲ್ಲಿ ತನ್ನ ವಾರ್ಷಿಕ ಸಂಸ್ಕೃತಿ ಶಿಬಿರ ನಡೆಸಲಿದೆ.
‘ನೀನಾಸಂ ಸಂಸ್ಕೃತಿ ಶಿಬಿರ-2002’ ಅಕ್ಟೋಬರ್ 13 ರಿಂದ 20 ರವರೆಗೆ ನಡೆಯಲಿದ್ದು , ಈ ಶಿಬಿರದಲ್ಲಿ ಸಾಹಿತ್ಯ, ಸಂಗೀತ, ನೃತ್ಯ, ಚಲನಚಿತ್ರ ಮುಂತಾದ ಸಾಂಸ್ಕೃತಿಕ ಮಾಧ್ಯಮಗಳ ಸ್ವರೂಪ ಮತ್ತು ಪರಸ್ಪರ ಸಂಬಂಧ ಕುರಿತು ನಾಡಿನ ಹಾಗೂ ಹೊರನಾಡಿನ ಗಣ್ಯರು ಉಪನ್ಯಾಸ, ಚರ್ಚೆ, ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡಲಿದ್ದಾರೆ. ಇದೇ ಸಂದರ್ಭದಲ್ಲಿ ಸಮಾಜದೊಂದಿಗೆ ಸಂಸ್ಕೃತಿಯ ಸಂಬಂಧ ವಿಷಯದ ಕುರಿತೂ ಮಾತುಕತೆ ನಡೆಯಲಿದೆ.
ಯಾರು ಬೇಕಾದರೂ ಶಿಬಿರದಲ್ಲಿ ಭಾಗವಹಿಸಬಹುದಾದರೂ ಸಾಂಸ್ಕೃತಿಕ ಕಾರ್ಯಕರ್ತರು, ಪತ್ರಕರ್ತರು, ಶಿಕ್ಷಕರಿಗೆ ಆದ್ಯತೆ. ಎಂಟು ದಿನಗಳ ಶಿಬಿರಕ್ಕೆ ಊಟ, ವಸತಿ ಸೇರಿ ಪ್ರವೇಶ ಶುಲ್ಕ 1000 ರುಪಾಯಿ.
ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವವರು ಸೆಪ್ಟಂಬರ್ 30ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಜಿ ತರಿಸಿಕೊಳ್ಳಲು ಸಂಪರ್ಕಿಸುವ ವಿಳಾಸ : ನೀನಾಸಂ ಸಂಸ್ಕೃತಿ ಶಿಬಿರ, ಹೆಗ್ಗೋಡು, ಸಾಗರ, ಕರ್ನಾಟಕ- 577 417. ದೂರವಾಣಿ: 08183-65646.
(ಇನ್ಫೋ
ವಾರ್ತೆ)
ಮುಖಪುಟ
/
ಇವತ್ತು...
ಈ
ಹೊತ್ತು...