ಬರದ ನೆರಳಿನ ದಸರೆಗೆ ಖಾಸಗಿ ಸಹಯೋಗದಿ ಅದ್ದೂರಿಯ ಹೊಳಪು
ಮೈಸೂರು : ಪ್ರಕೃತಿ ವಿಕೋಪ ಅಥವಾ ಮಳೆರಾಯನ ಮುನಿಸು ಪ್ರತಿ ವರ್ಷವೂ ಮರುಕಳಿಸುತ್ತಿರುವ ಕಾರಣದಿಂದಾಗಿ ಅದ್ದೂರಿ ದಸರೆಯೆನ್ನುವುದು ಮರೀಚಿಕೆಯಾಗುತ್ತಿದೆ. ಆದರೆ, ಈ ಬಾರಿಯ ದಸರೆಯನ್ನು ವೈಭವದಿಂದ ಆಚರಿಸಲು ಸರ್ಕಾರ ಸಂಕಲ್ಪ ಮಾಡಿದೆ.
ಈ ಬಾರಿ ವೈಭವದಿಂದ ದಸರೆ ಆಚರಿಸುವ ಸರ್ಕಾರದ ಯೋಚನೆಗೆ ಬರ ಅಡ್ಡವಾಗಿದೆ. ಆದರೆ ದಸರೆಯನ್ನು ಅದ್ದೂರಿಯಾಗಿ ಆಚರಿಸಲು ಸರ್ಕಾರ ನಿರ್ಧರಿಸಿದ್ದು , ಖಾಸಗಿಯವರ ಪ್ರಾಯೋಜಕತ್ವದಲ್ಲಿ ನಾಡಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ಇತ್ತೀಚೆಗೆ ದಸರೆಯನ್ನು ವೈಭವದಿಂದ ಆಚರಿಸಲು ಸಾಧ್ಯವಾಗಿಲ್ಲ . ಆ ಕಾರಣದಿಂದ ಚಾಮುಂಡೇಶ್ವರಿ ತಾಯಿ ಮುನಿಸಿಕೊಂಡಿದ್ದಾಳೇನೊ? ಈ ಬಾರಿ ದಸರೆಯನ್ನು ವೈಭವದಿಂದ ಆಚರಿಸಿ- ಉತ್ತಮ ಮಳೆಯಾಗಲೆಂದು ತಾಯಿ ಚಾಮುಂಡೇಶ್ವರಿಯನ್ನು ಪ್ರಾರ್ಥಿಸೋಣ ಎಂದು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್ ಹೇಳಿದರು. ವಿಜೃಂಭಣೆಯಿಂದ ದಸರೆಯನ್ನು ಆಚರಿಸುವುದರಿಂದ ಪ್ರವಾಸೋದ್ಯಮಕ್ಕೂ ಪ್ರೋತ್ಸಾಹ ದೊರೆಯುತ್ತದೆ ಎಂದು ಸಚಿವರು ಅಭಿಪ್ರಾಯ ಪಟ್ಟರು.
(ಇನ್ಫೋ
ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...