ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದರೋಡೆಕೋರರ ಕಂಡರೆ ಗುಂಡು ಹಾರಿಸಿ : ಸಾಂಗ್ಲಿಯಾನ ಫರ್ಮಾನು

By Staff
|
Google Oneindia Kannada News

ಬೆಂಗಳೂರು : ಬಂದೂಕು, ಪಿಸ್ತೂಲು ಹೊಂದಿರುವ ಪೊಲೀಸರು ದರೋಡೆಕೋರರನ್ನು ಹಿಡಿಯಲೇಬೇಕು. ಅಗತ್ಯ ಬಿದ್ದಲ್ಲಿ ಗುಂಡು ಹಾರಿಸಲೂ ಹಿಂದೆ ಮುಂದೆ ನೋಡಕೂಡದೆಂದು ಪೊಲೀಸ್‌ ಕಮಿಷನರ್‌ ಎಚ್‌.ಟಿ.ಸಾಂಗ್ಲಿಯಾನ ಫರ್ಮಾನು ಹೊರಡಿಸಿದ್ದಾರೆ.

ಎಸಿಪಿ ಹುದ್ದರಿಗಿಂತ ಮೇಲ್ಪಟ್ಟ ಅಧಿಕಾರಿಗಳು ಬಂದೂಕು, ಪಿಸ್ತೂಲು ಮೊದಲಾದ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಂಡಿರುತ್ತಾರೆ. ಇಳಿಸಂಜೆ ಮತ್ತು ರಾತ್ರಿ ಹೊತ್ತು ದರೋಡೆ ಮಾಡುತ್ತಿದ್ದ ಮಂದಿಯೀಗ ಹಾಡಹಗಲೇ ದೋಚಲು ಶುರುವಿಟ್ಟಿದ್ದಾರೆ. ಇದಕ್ಕೆ ದಂಡಂ ದಶಗುಣಂ ಎಂಬ ನಡೆಯೇ ಸರಿಯಾದುದು ಎಂದು ಸಾಂಗ್ಲಿಯಾನ ಶನಿವಾರ ಸುದ್ದಿಗಾರರಿಗೆ ಹೇಳಿದರು.

ಅಪರಾಧ ಮತ್ತೆ ಅತಿಯಾಗಿದೆ. ಅದಕ್ಕೇ, ಸಾಂಗ್ಲಿಯಾನ ಹೇಳುತ್ತಾರೆ...

  • ಇತ್ತೀಚೆಗೆ ಆಗಿರುವ ದರೋಡೆಗಳ ಬಗ್ಗೆ ಮಾಹಿತಿ ಕೊಟ್ಟವರಿಗೆ 1 ಲಕ್ಷ ರುಪಾಯಿವರೆಗೆ ಬಹುಮಾನ ಕೊಡುತ್ತೇವೆ.
  • ಕದ್ದ ವಾಹನಗಳನ್ನು, ಅಗತ್ಯಕ್ಕೆ ತಕ್ಕಂತೆ ಬದಲಾಯಿಸಿ ದರೋಡೆ ಮಾಡುವುದು ಹೆಚ್ಚಾಗಿದೆ. ಇನ್ನು ಮುಂದೆ ವರ್ಕ್‌ಶಾಪ್‌ಗಳಲ್ಲಿ ವಾಹನದ ಮಾಲಿಕತ್ವದ ಸೂಕ್ತ ದಾಖಲೆ ಪರಿಶೀಲಿಸದೆ, ವಾಹನವನ್ನು ಯಾರೂ ರಿಪೇರಿ ಮಾಡಕೂಡದು ಎಂದು ಆದೇಶ ಹೊರಡಿಸುತ್ತೇವೆ. ಅದನ್ನು ಉಲ್ಲಂಘಿಸಿದವರೂ ಶಿಕ್ಷೆಗೆ ಗುರಿಯಾಗುತ್ತಾರೆ.
  • ತಮ್ಮ ತಮ್ಮ ವಾಹನದ ದಾಖಲೆಗಳನ್ನು ಕಳುವಾಗದಂತೆ ನಾಗರಿಕರು ಎಚ್ಚರ ವಹಿಸಬೇಕು.
  • ಬ್ಯಾಂಕರ್‌ಗಳಿಗೆ ಗನ್‌ ಪರವಾನಗಿ ಪಡೆಯುವ ಸಲಹೆಯನ್ನು ಈಗಾಗಲೇ ಕೊಟ್ಟಿದ್ದೇನೆ. ಆದರೆ ಬ್ಯಾಂಕುಗಳು ಮುಂದೆ ಬರುತ್ತಿಲ್ಲ. ಸ್ವಯಂ ರಕ್ಷಣೆಗೆ ಶಸ್ತ್ರಾಸ್ತ್ರ ಹೊಂದುವುದು ಅತ್ಯವಶ್ಯ.
  • ಕದ್ದ ಮಾಲನ್ನು ಕೊಳ್ಳುವ ಪಾನ್‌ ದಲ್ಲಾಳಿಗಳು ಮೊದಲಾದವರ ಮೇಲೆ ತೀವ್ರ ನಿಗಾ ಇಡಲಾಗುವುದು.
  • ಅಗತ್ಯವಿರುವ ಹೊಸ ಬಡಾವಣೆಗಳಲ್ಲಿ ಪೊಲೀಸ್‌ ಠಾಣೆಗಳನ್ನು ತೆರೆಯಲಾಗುವುದು.
(ಇನ್ಫೋ ವಾರ್ತೆ)

ಮುಖಪುಟ / ಸಾಂಗ್ಲಿಯಾನಾ ವಾಚ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X