ಸ್ವಾತಂತ್ರ್ಯ ಸಂಗ್ರಾಮದ ಸ್ಫೂರ್ತಿ ಬೌದ್ಧಿಕವಾಗಿಯೂ ನಾಶವಾಯಿತಾ?
*ಅರವಿಂದ ಚೊಕ್ಕಾಡಿ, ಕಾರ್ಕಳ
ಸಾವು
ಎರಡು
ಬಗೆಯದ್ದಿರುತ್ತದೆ.
ಒಂದು
ಭೌತಿಕ
ಸಾವು.
ಇನ್ನೊಂದು
ಬೌದ್ಧಿಕ
ಸಾವು.
ಮಹಾವ್ಯಕ್ತಿಗಳು,
ಮಹಾನ್
ಘಟನೆಗಳು
ಭೌತಿಕವಾಗಿ
ಒಂದು
ಕಾಲಘಟ್ಟದಲ್ಲಿ
ಇಲ್ಲವಾದರೂ
ತಮ್ಮ
ಬೌದ್ಧಿಕ
ಸತ್ವದಿಂದ
ಉಳಿದುಕೊಳ್ಳುವುದನ್ನು
ಗಮನಿಸಬಹುದು.
ನಮ್ಮ ದೇಶಕ್ಕೆ ಅಂಥ ಸ್ಫೂರ್ತಿಗಳು ಸಾಕಷ್ಟಿವೆಯಾದರೂ ಈ ದೇಶದ ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ದೃಷ್ಟಿಕೋನಕ್ಕೆ ಹೊಸ ಆಯಾಮ ಕೊಟ್ಟ ಸ್ಫೂರ್ತಿ ಸಿಗುವುದು ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ . ಅಲ್ಲಿ ಸಾಮಾಜಿಕ ಸುಧಾರಣೆ, ಸಾಂಸ್ಕೃತಿಕ ಪುನರುತ್ಥಾನ, ಪ್ರಜಾಸತ್ತೆಯ ಆಶಯಗಳೆಲ್ಲ ಕಂಡುಬರುತ್ತವೆ.
ನಮ್ಮ ರಾಜ್ಯಾಂಗವು ಹೇಳುವಂಥ ಆಶಯಗಳು ಏನಿವೆಯೋ ಅವಕ್ಕೆ ಅತ್ಯಗತ್ಯವಾಗಿ ಬೇಕಾಗಿರುವಂಥದ್ದು ಆರ್ಥಿಕ ಶಕ್ತಿ . ಆ ಶಕ್ತಿಯನ್ನು ತಂದು ಕೊಡಬಲ್ಲ ಸಾಮರ್ಥ್ಯವಿರುವುದು ಸಣ್ಣ ಘಟಕಗಳಿಗೇ ಹೊರತು ಬೃಹತ್ ಉದ್ದಿಮೆಗಳಿಗಲ್ಲ . ಏಕೆಂದರೆ ದೇಶದ ಬಹು ಸಂಖ್ಯಾತರು ಮತ್ತು ಮಧ್ಯಮ ವರ್ಗದವರು. ಅವರು ದೃಢರಾಗದೆ ದೇಶ ದೃಢವಾಗುತ್ತದೆ ಎಂದುಕೊಂಡರೆ ಅದು ಕನಸಿನ ಮಾತು.
ಅಂದಾಗ ನಮ್ಮಲ್ಲಿ ಆಗಬೇಕಾದ್ದು ಸಂಪತ್ತಿನ ಮರು ಹಂಚಿಕೆ. ವಿಕೇಂದ್ರೀಕೃತ ಆರ್ಥಿಕ ವ್ಯವಸ್ಥೆ. ಅಂಥಲ್ಲಿ ಕೃಷಿ ಪ್ರಧಾನ ಅರ್ಥ ವ್ಯವಸ್ಥೆಯ ಪುನಶ್ಚೇತನಕ್ಕೆ ಸಣ್ಣ ಹಿಡುವಳಿಗಳು ಪೂರಕವಾಗುತ್ತವೆ. ಅವು ಬಹು ಸಂಖ್ಯಾತರಿಗೆ ಉದ್ಯೋಗ ದೊರಕಿಸಿಕೊಡಬಲ್ಲವು. ಅದೇ ರೀತಿ ಸಣ್ಣ ಸಣ್ಣ ಉತ್ಪಾದನಾ ಘಟಕಗಳು. ಇವು ಹೆಚ್ಚಾದಂತೆ ಆರ್ಥಿಕ ಭದ್ರತೆ ಒದಗುತ್ತದೆ. ಅದರಿಂದ ಗುಣಾತ್ಮಕ ಶಿಕ್ಷಣ ಪಡೆಯುವುದಕ್ಕೆ ಶಿಕ್ಷಣದಿಂದ ಅರಿವು ತಂದುಕೊಂಡು ಸಾಮಾಜಿಕ-ಸಾಂಸ್ಕೃತಿಕ ಪಿಡುಗುಗಳನ್ನು ತೊಲಗಿಸಿ ಪುರೋಗಾಮಿ ವ್ಯವಸ್ಥೆ ರೂಪಿಸಿಕೊಳ್ಳುವುದಕ್ಕೆ ಸಾಧ್ಯವಾದೀತು.
ಆದರೆ ಇದಕ್ಕೆ ವ್ಯತಿರಿಕ್ತವಾಗಿ ನಮ್ಮಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಬೇಕು. ಜಾಗತೀಕರಣವು ದಿನೇದಿನೇ ವ್ಯಾಪಕವಾಗುತ್ತಿದ್ದು ದೇಶದ ಆರ್ಥಿಕ ಸಂಪನ್ಮೂಲಗಳು ಹೊರಗೆ ಹರಿದುಹೋಗುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಅವಕಾಶ ಸೃಷ್ಟಿಯಾಗಿದೆ. ಇದರೊಂದಿಗೆ ಯಾಂತ್ರೀಕರಣವೂ ವಿಪರೀತ ವೇಗದಲ್ಲಿ ಹೆಚ್ಚುತ್ತಿರುವುದರಿಂದ ಹಾಗೂ ಹದ್ದುಮೀರಿ ಬೆಳೆಯುತ್ತಿರುವ ಜನಸಂಖ್ಯೆ ನಿಯಂತ್ರಿಸುವುದಕ್ಕೆ ಸಾಧ್ಯವಾಗದೆ ಇರುವುದರಿಂದ ಬಹು ಸಂಖ್ಯಾತರು ಉದ್ಯೋಗ ವಂಚಿತರಾಗಬೇಕಾದಂಥ ಸ್ಥಿತಿ ನಿರ್ಮಾಣವಾಗಿದೆ.
ಜಾಗತೀಕರಣ ಪ್ರಕ್ರಿಯೆಗೆ ಅನಿವಾರ್ಯವೆನ್ನುವಂತಿರುವ ಖಾಸಗೀಕರಣ ಸಂಪತ್ತಿನ ಕೇಂದ್ರೀಕರಣಕ್ಕೆ ದಾರಿ ಮಾಡಿಕೊಟ್ಟು ಆರ್ಥಿಕ ಅಸಮತೋಲನವನ್ನುಂಟು ಮಾಡಿದೆ. ಉತ್ಪಾದನಾ ಘಟಕಗಳು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖಾಸಗಿ ಒಡೆತನಕ್ಕೆ ಒಳಪಟ್ಟಾಗ ಅಲ್ಲಿ ಅತಿರೇಕದ ಲಾಭಕೋರತನ ಕಾಣಿಸುತ್ತದೆ.
ನಮ್ಮ
ನಿರ್ಬಲತೆ
ಗಮನಿಸಿದರೆ
ಸ್ವಾತಂತ್ರ್ಯ
ಸಂಗ್ರಾಮದ
ಸ್ಫೂರ್ತಿ
ಬೌದ್ಧಿಕವಾಗಿಯೂ
ನಾಶವಾಗಿ
ಬಿಟ್ಟಿತೇನೋ
ಎನಿಸುತ್ತದೆ.
ಮುಖಪುಟ
/
ಇವತ್ತು...
ಈ
ಹೊತ್ತು...