ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಡಜನತೆಯತ್ತ ಕೇಂದ್ರದ ಕರುಣೆ, ಅಗ್ಗ ಬೆಲೆಗೆ ಗ್ಯಾಸ್‌ ಸಿಲಿಂಡರ್‌

By Staff
|
Google Oneindia Kannada News

ನವದೆಹಲಿ: ಸ್ವಾತಂತ್ರ್ಯೋತ್ಸವದ ಅಂಗವಾಗಿ ಐದು ಕೆಜಿ ಅಡುಗೆ ಅನಿಲವನ್ನು ಗ್ರಾಮೀಣ ಪ್ರದೇಶದ ಬಡಬಗ್ಗರಿಗೆ ಹಂಚಲು ಕೇಂದ್ರ ಪೆಟ್ರೋಲಿಯಂ ಸಚಿವ ರಾಮ್‌ನಾಯಕ್‌ ನಿರ್ಧರಿಸಿದ್ದಾರೆ.

ಈ ಯೋಜನೆಯನ್ನು ಆಗಸ್ಟ್‌16ರಂದು ಸ್ವತಃ ರಾಮ್‌ ನಾಯಕ್‌ ಉದ್ಘಾಟಿಸುವರು. ಸಾಮಾನ್ಯವಾಗಿ, ಗ್ಯಾಸ್‌ ಸಿಲಿಂಡರ್‌ ಕೊಳ್ಳಬೇಕಿದ್ದರೆ 700 ರೂಪಾಯಿ ಠೇವಣಿ ಇಡಬೇಕು. ಖಾಲಿಯಾದ ಸಿಲಿಂಡರ್‌ ತುಂಬಿಸಬೇಕಿದ್ದರೆ 250 ರೂಪಾಯಿ ತೆರಬೇಕು. ಇದರಿಂದ ಬಡವರಿಗೆ ತುಂಬಾ ಕಷ್ಟವಾಗುತ್ತಿದೆ. ಆದ್ದರಿಂದ ಕಡಿಮೆ ಬೆಲೆಗೆ ಸಿಲಿಂಡರ್‌ ವಿತರಿಸಲು ನಿರ್ಧರಿಸಲಾಗಿದೆ ಎಂದು ರಾಮ್‌ನಾಯಕ್‌ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯ ಫಲಾನುಭವಿಗಳು ಹೊಸ ಸಿಲಿಂಡರ್‌ ಕೊಳ್ಳಲು 350 ರೂಪಾಯಿ ಠೇವಣಿ ಇಟ್ಟರೆ ಸಾಕು. ದುರ್ಗಮ ಹಳ್ಳಿಗಳಲ್ಲಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರಿಗೆ ಈ ಯೋಜನೆಯಿಂದ ಪ್ರಯೋಜನವಾಗಲಿದೆ. 14 ಕೆಜಿ ತೂಕದ ಸಿಲಿಂಡರ್‌ಗಳ ಸಾಗಾಣಿಕೆಯೂ ಕಷ್ಟವಾದುದರಿಂದ ಗ್ರಾಮೀಣ ಪ್ರದೇಶದವರನ್ನೇ ಗಮನದಲ್ಲಿಟ್ಟುಕೊಂಡು ಐದು ಕೆಜಿಯ ಸಿಲಿಂಡರ್‌ಗಳನ್ನು ತಯಾರಿಸಲು ಕಂಪೆನಿಗಳಿಗೆ ತಿಳಿಸಲಾಗಿದೆ ಎಂದು ಸಚಿವರು ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X