ಬರ ಪೀಡಿತ ಜಿಲ್ಲೆಗಳಲ್ಲಿ ಕಂದಾಯ ಮನ್ನಾ - ಶ್ರೀಕಂಠೇಗೌಡ
ಹಾಸನ : ತೀವ್ರ ಬರದಿಂದಾಗಿ ತತ್ತರಿಸಿ ಹೋಗಿರುವ ಜಿಲ್ಲೆಗಳಲ್ಲಿ ಕಂದಾಯವನ್ನು ಸಂಪೂರ್ಣ ಮನ್ನಾ ಮಾಡಲು ರಾಜ್ಯಸರಕಾರ ನಿರ್ಧರಿಸಿದೆ.
ಕಂದಾಯ ಸಚಿವ ಎಚ್. ಸಿ. ಶ್ರೀಕಂಠಯ್ಯ ಸಂದರ್ಶನವೊಂದರಲ್ಲಿ ಈ ವಿಷಯವನ್ನು ತಿಳಿಸಿದ್ದು, ರಾಜ್ಯದಲ್ಲಿ ಈಗಾಗಲೇ 143 ತಾಲ್ಲೂಕುಗಳಲ್ಲಿ ಕಂದಾಯ ಮನ್ನಾ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದರು. ಜಿಲ್ಲಾಧಿಕಾರಿಗಳಿಂದ ಬರುವ ವರದಿಯನ್ನು ಗಮನದಲ್ಲಿಟ್ಟುಕೊಂಡು ಕಂದಾಯವನ್ನು ಮನ್ನಾ ಮಾಡಲಾಗುವುದು. ಈ ಕಂದಾಯ ಮನ್ನಾ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ 50 ಕೋಟಿ ರೂಪಾಯಿ ನಷ್ಟವಾಗಲಿದೆ ಎಂದು ಶ್ರೀಕಂಠಯ್ಯ ತಿಳಿಸಿದರು.
ರಾಜ್ಯದಲ್ಲಿ ಇನ್ನೂ ಬರಪರಿಹಾರ ಕಾಮಗಾರಿಯನ್ನು ಆರಂಭಿಸಲಾಗಿಲ್ಲ. ಕೂಲಿಗಾಗಿ ಕಾಳು ಯೋಜನೆ ಕೂಡ ಸಿದ್ಧತೆಯ ಹಂತದಲ್ಲೇ ಇದೆ. 8 ಲಕ್ಷ ಟನ್ ಪಡಿತರ ಬಿಡುಗಡೆ ಮಾಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಲಾಗಿದೆ. ಆದರೆ ಒಂದು ಲಕ್ಷ ಟನ್ ಪಡಿತರ ಮಾತ್ರ ರಾಜ್ಯವನ್ನು ತಲುಪಿದೆ. ಜಿಲ್ಲೆಯಲ್ಲಿ ಬರಪರಿಹಾರ ಕಾಮಗಾರಿ ಕೈಗೊಳ್ಳುವ ಕುರಿತು ಜನಪ್ರತಿನಿಧಿಗಳು ಮತ್ತು ಶಾಸಕರ ಸಭೆಯನ್ನು ಆಗಸ್ಟ್ 13ರಂದು ಕರೆಯಲಾಗಿದೆ ಎಂದು ಸಚಿವರು ಹೇಳಿದರು.
(ಇನ್ಫೋ
ವಾರ್ತೆ)
ಮುಖಪುಟ
/
ಇವತ್ತು...
ಈ
ಹೊತ್ತು...