ಐಟಿ ಗೆಳೆಯರ ಕಂಡುಕೊಳ್ಳಲು ಬೆಂಗಳೂರಿಗೆ ಬಂದ ಘಾನಾ ಅಧ್ಯಕ್ಷ
ಬೆಂಗಳೂರು : ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಂಗಳೂರು ತುಂಬ ಪ್ರಸಿದ್ಧವಾದುದು. ಸಂಪರ್ಕ ತಂತ್ರಜ್ಞಾನದಲ್ಲೂ ಬೆಂಗಳೂರಿನದು ದೊಡ್ಡ ಹೆಸರು. ಎರಡೂ ಕ್ಷೇತ್ರಗಳಲ್ಲಿ ಗೆಳೆಯರನ್ನು ಕಂಡುಕೊಳ್ಳಲು ಇಲ್ಲಿಗೆ ಬಂದಿದ್ದೇನೆ.
- ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಹೆಚ್ಚಿನ ಸಾಧನೆಗಾಗಿ ಗೆಳೆಯರನ್ನು ಕಂಡುಕೊಳ್ಳಲು ಭಾರತ ಪ್ರವಾಸದಲ್ಲಿರುವ ಘಾನಾದ ಅಧ್ಯಕ್ಷ ಜಾನ್ ಅಗ್ಯೆಕುಮ್ ಕುಫೂರ್ ಆ.7 ರ ಬುಧವಾರ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಹೇಳಿದ ಮಾತುಗಳಿವು.
ಇಲ್ಲಿ ಕೆಲವು ಉಪಯುಕ್ತ ಗೆಳೆಯರು ದೊರಕುವರೆಂದು ನಂಬಿದ್ದೇನೆ. ಘಾನಾದಲ್ಲಿ ಮಾಹಿತಿ ತಂತ್ರಜ್ಞಾನದ ಘಟಕಗಳನ್ನು ಸ್ಥಾಪಿಸಲು ನಾವು ಆಸಕ್ತರಾಗಿದ್ದೇವೆ ಎಂದ ಘಾನಾದ ಅಧ್ಯಕ್ಷರು, ತಮ್ಮ ಭೇಟಿ ಉಭಯ ದೇಶಗಳ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಲಾಭವಾಗುವ ಕುರಿತು ಆಶಾಭಾವನೆ ವ್ಯಕ್ತಪಡಿಸಿದರು.
ಇದಕ್ಕೂ ಮುನ್ನ ಮುಂಬಯಿಯಿಂದ ಬೆಂಗಳೂರಿಗೆ ಆಗಮಿಸಿದ ಜಾನ್ ಅವರನ್ನು ರಾಜ್ಯಪಾಲೆ ವಿ.ಎಸ್.ರಮಾದೇವಿ ಹಾಗೂ ಮುಖ್ಯಮಂತ್ರಿ ಎಸ್ಸೆಂ.ಕೃಷ್ಣ ಸ್ವಾಗತಿಸಿದರು. ರಾಜ್ಯಪಾಲರೊಂದಿಗೆ ಮಧ್ಯಾಹ್ನದ ಊಟದಲ್ಲಿ ಭಾಗವಹಿಸಿದ್ದ ಘಾನಾ ಅಧ್ಯಕ್ಷರು- ಇನ್ಫೋಸಿಸ್ ಹಾಗೂ ಸಾಫ್ಟ್ವೇರ್ ಟೆಕ್ನಾಲಜಿ ಪಾರ್ಕ್ಗಳನ್ನು ಸಂದರ್ಶಿಸಿದರು.
(ಪಿಟಿಐ)
ಮುಖಪುಟ / ಕರ್ನಾಟಕ ಸಿಲಿಕಾನ್ ಕಣಿವೆ