ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಜನಿಕ ಸಂಪರ್ಕ ಸೊಸೈಟಿ ಪ್ರಶಸ್ತಿ :ಎಸ್ಸೆಂ ಕೃಷ್ಣ ವರ್ಷದ ವ್ಯಕ್ತಿ

By Staff
|
Google Oneindia Kannada News

ಬೆಂಗಳೂರು : ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ವರ್ಷದ ವ್ಯಕ್ತಿ, ನಗರದ ಮೇಯರ್‌ ಕೆ.ಚಂದ್ರಶೇಖರ್‌ ಪರಿಸರ ರಕ್ಷಕ, ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ವಿ.ಪಿ.ಬಳಿಗಾರ್‌ ಕ್ಷಾಮದಲ್ಲೂ ವಿದ್ಯುತ್‌ ಸಮಸ್ಯೆ ನಿವಾರಕ !

ಭಾರತೀಯ ಸಾರ್ವಜನಿಕ ಸಂಪರ್ಕ ಸೊಸೈಟಿಯ ಬೆಂಗಳೂರು ವಿಭಾಗ ವಿವಿಧ ಪ್ರಶಸ್ತಿಗಳಿಗೆ ಆಯ್ಕೆ ಮಾಡಿರುವ ವ್ಯಕ್ತಿಗಳಿವರು. ಆಯ್ಕೆಯ ಪೂರ್ಣ ಪಾಠ...

  • ಸಾರ್ವಜನಿಕ ಸಂಪರ್ಕದ ವರ್ಷದ ವ್ಯಕ್ತಿ ಎಸ್ಸೆಂ ಕೃಷ್ಣ.
  • ಪರಿಸರ ರಕ್ಷಣೆಗೆ ಮೇಯರ್‌ ಕೆ.ಚಂದ್ರಶೇಖರ್‌.
  • ಪ್ರತಿಕೂಲ ಪರಿಸ್ಥಿತಿಯಲ್ಲೂ ಸರಾಗ ವಿದ್ಯುತ್‌ ನಿರ್ವಹಣೆಗಾಗಿ ವಿ.ಪಿ.ಬಳಿಗಾರ್‌ ಅವರಿಗೆ ಜ್ಯೋತಿ ರಾಮಲಿಂಗಂ ಪ್ರಶಸ್ತಿ.
  • ಜಾನಪದ ಲೋಕದ ಜನಕ ಡಾ.ಎಚ್‌.ಎಲ್‌.ನಾಗೇಗೌಡ, ಚಿತ್ರತಾರೆ ಜಯಂತಿ, ರಂಗಭೂಮಿಯ ಸಿ.ಜಿ.ಕೃಷ್ಣಸ್ವಾಮಿ, ಮೇಕಪ್‌ ನಾಣಿ, ಎಚ್‌.ವಿ.ಮಲ್ಲಿಕಾರ್ಜುನ್‌, ಪ್ರದೀಪ್‌ ಗುಹಾ ಮತ್ತು ಡಾ। ವೆಂಕಟೇಶ್‌ ಕೃಷ್ಣಮೂರ್ತಿ ಅವರಿಗೆ ವಿಶೇಷ ಪ್ರಶಸ್ತಿ.
ಭಾರತೀಯ ಸಾರ್ವಜನಿಕ ಸಂಪರ್ಕ ಸೊಸೈಟಿಯ ಬೆಂಗಳೂರು ವಿಭಾಗದ ಅಧ್ಯಕ್ಷ ಡಿ.ಅಶೋಕ್‌ ಈ ಪ್ರಶಸ್ತಿಗಳನ್ನು ಪ್ರಕಟಿಸಿದ್ದು, ಆಗಸ್ಟ್‌ 9ರಂದು ಪ್ರಶಸ್ತಿ ಪ್ರದಾನ ಮಾಡುವುದಾಗಿ ಹೇಳಿದರು.

(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X