ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ದೀಪನ ಮದ್ದು ; ಈಗ ರಾಜ್ಯದ ಲಿಫ್ಟರ್‌ ಸತೀಶ್‌ ರೈ ಸರದಿ

By Staff
|
Google Oneindia Kannada News

ಮ್ಯಾಂಚೆಸ್ಟರ್‌: ರಾಜ್ಯದ ವೇಟ್‌ ಲಿಫ್ಟರ್‌ ಸತೀಶ್‌ ರೈ ಉದ್ದೀಪನ ಮದ್ದು ಸೇವಿಸಿರುವುದು ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದ್ದು , ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಭಾರತದ ಅಭೂತಪೂರ್ವ ಯಶಸ್ಸಿನ ಮೇಲೆ ಕರಿನೆರಳು ಬಿದ್ದಂತಾಗಿದೆ.

ಕಾಮನ್‌ ವೆಲ್ತ್‌ ಕ್ರೀಡಾ ಕೂಟದಲ್ಲಿ ಎರಡು ಚಿನ್ನ ಮತ್ತು ಒಂದು ಕಂಚು ಗೆದ್ದಿರುವ ವೇಟ್‌ ಲಿಫ್ಟರ್‌ ಸತೀಶ್‌ ರೈ ಅವರು ನಿಷೇಧಿತ ಔಷಧಿ ಸೇವಿಸಿರುವುದು ಪತ್ತೆಯಾಗಿದೆ ಎಂದು ಭಾರತೀಯ ಒಲಿಂಪಿಕ್‌ ಸಂಸ್ಥೆಯ ನಿರ್ದೇಶಕ ಎಸಿವಿ ಪ್ರಸಾದ್‌ ಹೇಳಿದ್ದಾರೆ. ಆದರೆ ಇಷ್ಟರವರೆಗೆ ಕಾಮನ್‌ವೆಲ್ತ್‌ ಗೇಮ್ಸ್‌ ಫೆಡರೇಷನ್‌ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ.

ಇದಕ್ಕೆ ಮುನ್ನ ಭಾರತದ ಲಿಫ್ಟರ್‌ ಕೃಷ್ಣನ್‌ ಮಾದುಸ್ವಾಮಿ ಅವರು ಉದ್ದೀಪನ ಔಷಧಿ ಸೇವನೆ ಹಿನ್ನೆಲೆಯಲ್ಲಿ ತಾವು ಗೆದ್ದ ಪದಕಗಳನ್ನು ಹಿಂತಿರುಗಿಸಿದ್ದರು. ಈ ಅವಮಾನದ ಪ್ರಸಂಗದ ಹಿನ್ನೆಲೆಯಲ್ಲಿಯೇ ಸತೀಶ್‌ ರೈ ಅವರು ಉದ್ದೀಪನ ಪ್ರಸಂಗ ಸೇವಿಸಿರುವ ಪ್ರಸಂಗ ವರದಿಯಾಗಿದೆ.

ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಒಟ್ಟು 32 ಚಿನ್ನದ ಪದಕ ಗಳಿಸುವ ಮೂಲಕ ಭಾರತ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ಇದು ಕಾಮನ್‌ವೆಲ್ತ್‌ ಕ್ರೀಡಾಕೂಟದ ಇತಿಹಾಸದಲ್ಲಿ ಭಾರತದ ಸರ್ವೋತ್ಕೃಷ್ಟ ಸಾಧನೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X