‘ಮದುವೆಯಾದರೆ ಸಾಲದು, ರಿಜಿಸ್ಟ್ರೇಷನ್ ಮಾಡಿಸಿಕೊಳ್ಳಬೇಕು !’
ದಾವಣಗೆರೆ: ಪ್ರತಿ ವಿವಾಹದ ನೋಂದಣಿಯನ್ನು ಕಡ್ಡಾಯಗೊಳಿಸಿ ಶಾಸನ ರೂಪಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯ ಕಾನೂನು ಸಚಿವ ಡಿ. ಬಿ. ಚಂದ್ರೇಗೌಡ ತಿಳಿಸಿದ್ದಾರೆ.
ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಚಿವರು, ಮಹಿಳೆಯರ ಶೋಷಣೆ ತಡೆಯುವ ನಿಟ್ಟಿನಲ್ಲಿ ಈ ವಿವಾಹ ನೋಂದಣಿ ಕಾಯ್ದೆಯನ್ನು ಜಾರಿಗೆ ತರಲಾಗುತ್ತಿದೆ. ಈ ಕುರಿತ ಮಸೂದೆ ಸಿದ್ಧವಾಗಿದ್ದು, ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದರು.
ಈ ಶಾಸನದ ಪ್ರಕಾರ ವಿವಾಹವಾದ ಪ್ರತಿಯಾಬ್ಬರು ನೋಂದಣಿ ಮಾಡುವುದು ಕಡ್ಡಾಯ. ನೋಂದಣಿ ಕಾರ್ಯ ನಿರ್ವಹಿಸಲು ಪ್ರತ್ಯೇಕ ಸಂಸ್ಥೆಗೆ ಜವಾಬ್ದಾರಿ ವಹಿಸಿಕೊಡಲಾಗುವುದು. ಅಲ್ಲದೆ ಗಂಡ ಹೆಂಡಿರ ನಡುವಿನ ಆಂತರಿಕ ಹಿಂಸೆ ಹಾಗೂ ಆಸ್ತಿ ವಿವಾದ ಪರಿಹರಿಸುವ ನಿಟ್ಟಿನಲ್ಲಿ ಡೊಮೆಸ್ಟಿಕ್ ನ್ಯಾಯಾಲಯ ತೆರೆಯುವ ಬಗ್ಗೆಯೂ ಸರಕಾರ ಯೋಚಿಸುತ್ತಿದೆ. ಗಂಡನ ಆಸ್ತಿಯಲ್ಲಿ ಹೆಂಡತಿಗೆ ಹಕ್ಕು ಇರುವಂತೆ ಹೆಂಡತಿಯ ಆಸ್ತಿಯಲ್ಲಿ ಗಂಡನಿಗೂ ಹಕ್ಕಿರುತ್ತದೆ. ಇದಲ್ಲದೆ ಆಂತರಿಕ ಕಲಹಗಳಿಗೂ ಡೊಮೆಸ್ಟಿಕ್ ನ್ಯಾಯಾಲಯ ಪರಿಹಾರ ಸೂಚಿಸಲಿದೆ ಎಂದು ಚಂದ್ರೇಗೌಡ ತಿಳಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...