ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪ ಶ್ರೀನಾಥು, ಐಸಿಸಿ ಕ್ರಿಕೆಟ್‌ ಟೂರ್ನಿಗೂ ಆಯ್ಕೆಯಾಗಲಿಲ್ಲ !

By Staff
|
Google Oneindia Kannada News

ಮುಂಬಯಿ : ಮೈಸೂರು ಎಕ್ಸ್‌ಪ್ರೆಸ್‌ ಜಾವಗಲ್‌ ಶ್ರೀನಾಥ್‌ ಮತ್ತೊಮ್ಮೆ ಆಯ್ಕೆಗಾರರ ಅವಕೃಪೆಗೆ ತುತ್ತಾಗಿದ್ದು , ಸೆಪ್ಟಂಬರ್‌ನಲ್ಲಿ ಶ್ರೀಲಂಕಾದಲ್ಲಿ ನಡೆಯುವ ಮಿನಿ ವಿಶ್ವಕಪ್‌ ಎಂದೇ ಹೆಸರಾದ ಐಸಿಸಿ ಟ್ರೋಫಿ ಸರಣಿಯಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಸೆ.12 ರಿಂದ 19 ರವರೆಗೆ ಕೊಲಂಬೊದಲ್ಲಿ ನಡೆಯುವ ಐಸಿಸಿ ಟೂರ್ನಿಗೆ 20 ಮಂದಿ ಸಂಭವನೀಯ ಆಟಗಾರರ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಲಾಯಿತು. ರೈಲ್ವೇಸ್‌ನ ಆಲ್‌ರೌಂಡರ್‌ ಜೆ.ಪಿ.ಯಾದವ್‌ ಹಾಗೂ ತಮಿಳುನಾಡಿನ ವೇಗದ ಬೌಲರ್‌ ಎಲ್‌.ಬಾಲಾಜಿ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಪಡೆದ ಹೊಸ ಮುಖಗಳು.

ಹೆಚ್ಚಿನ ಪ್ರಯೋಗಗಳಿಗೆ ಕೈ ಹಾಕಲು ಬಯಸದ ಆಯ್ಕೆ ಮಂಡಳಿ, ನ್ಯಾಟ್‌ವೆಸ್ಟ್‌ ಟ್ರೋಫಿ ಗೆದ್ದ ತಂಡದಲ್ಲಿನ 15 ಜನರನ್ನೂ ಉಳಿಸಿಕೊಂಡಿದೆ. ವಿಕೆಟ್‌ ಕೀಪರ್‌ಗಳಾದ ಪಾರ್ಥಿವ್‌ ಪಟೇಲ್‌ ಹಾಗೂ ಅಜಯ್‌ ರಾತ್ರ ಇಬ್ಬರೂ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಪಾಪ ಶ್ರೀನಾಥು !
ಟೆಸ್ಟ್‌ ಕ್ರಿಕೆಟ್‌ಗೆ ವಿದಾಯ ಪ್ರಕಟಿಸುವ ಮೂಲಕ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ಅವಕೃಪೆಗೆ ಪಾತ್ರರಾಗಿರುವ ಜಾವಗಲ್‌ ಶ್ರೀನಾಥ್‌ ಅವರನ್ನು ಐಸಿಸಿ ಟೂರ್ನಿಗೂ ಆಯ್ಕೆ ಮಾಡದಿರುವ ಮೂಲಕ ಆಯ್ಕೆಗಾರರು ಅಚ್ಚರಿ ಮೂಡಿಸಿದ್ದಾರೆ. ಸಂಭವನೀಯರ ತಂಡ ಆಯ್ಕೆ ಮಾಡುವ ಸಂದರ್ಭದಲ್ಲಿ ಶ್ರೀನಾಥ್‌ ಹೆಸರು ಪ್ರಸ್ತಾಪವಾದರೂ, ಆಯ್ಕೆಗಾರರು ಅವರನ್ನು ಪರಿಗಣಿಸಲಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ನಿರಂಜನ ಷಾ ಸುದ್ದಿಗಾರರಿಗೆ ತಿಳಿಸಿದರು.

ಏಕದಿನ ತಂಡವನ್ನು ನಾಯಕ ಸೌರವ್‌ ಗಂಗೂಲಿ ಚೆನ್ನಾಗಿ ಮುನ್ನಡೆಸುತ್ತಿದ್ದಾರೆ ಎಂದು ಷಾ ಶ್ಲಾಘಿಸಿದರು.

ಸಂಭವನೀಯರ ತಂಡ ಇಂತಿದೆ :
ಸೌರವ್‌ ಗಂಗೂಲಿ, ವೀರೇಂದ್ರ ಶೆಹ್ವಾಗ್‌, ದಿನೇಶ್‌ ಮಾಂಗಿಯಾ, ಸಚಿನ್‌ ತೆಂಡೂಲ್ಕರ್‌, ರಾಹುಲ್‌ ದ್ರಾವಿಡ್‌, ಯುವರಾಜ್‌ ಸಿಂಗ್‌, ಮೊಹಮ್ಮದ್‌ ಕೈಫ್‌, ಹರ್ಭಜನ್‌ ಸಿಂಗ್‌, ಅನಿಲ್‌ ಕುಂಬ್ಳೆ, ಜಹೀರ್‌ ಖಾನ್‌, ವಿವಿಎಸ್‌ ಲಕ್ಷ್ಮಣ್‌, ಅಜಿತ್‌ ಅಗರ್ಕರ್‌, ಆಶಿಷ್‌ ನೆಹ್ರಾ, ಪಾರ್ಥಿವ್‌ ಪಟೇಲ್‌, ಅಜಯ್‌ ರಾತ್ರಾ, ಮುರಳಿ ಕಾರ್ತಿಕ್‌, ಜೆಪಿ ಯಾದವ್‌, ಸಂಜಯ್‌ ಬಂಗಾರ್‌, ಎಲ್‌ ಬಾಲಾಜಿ ಮತ್ತು ಟಿನು ಯಾಹಾನನ್‌.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X