‘ಭಾರತದಲ್ಲಿ ಮಿಲಿಟರಿಗೇ ಮೀಸಲಾದ ಉಪಗ್ರಹ ತಯಾರಿ’
ಬೆಂಗಳೂರು : ಮಿಲಿಟರಿಗಾಗಿಯೇ ಮೀಸಲಾದ ವಿಶೇಷ ಉಪಗ್ರಹದ ತಯಾರಿ ಭಾರತದಲ್ಲಿ ನಡೆಯುತ್ತಿದೆ ಎಂದು ರಕ್ಷಣಾ ಸಚಿವರ ವೈಜ್ಞಾನಿಕ ಸಲಹೆಗಾರ ವಿ.ಕೆ.ಆತ್ರೆ ತಿಳಿಸಿದರು.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಯ ಮುಖ್ಯಸ್ಥರೂ ಆಗಿರುವ ಆತ್ರೆ, ‘ಮಾಹಿತಿ ಮತ್ತು ಜಾಲ ಭದ್ರತೆ’ ಕುರಿತ ರಾಷ್ಟ್ರೀಯ ಸಮಾವೇಶವನ್ನು ಶುಕ್ರವಾರ ಉದ್ಘಾಟಿಸಿ ಮಾತಾಡಿದರು. ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಎಂಜಿನಿಯರಿಂಗ್ ಸಮಾವೇಶವನ್ನು ಆಯೋಜಿಸಿದೆ.
ರಕ್ಷಣಾ ಉಪಗ್ರಹ ರಚನಾ ಯೋಜನೆಯ ಕುರಿತು ಈಗಲೇ ಹೆಚ್ಚಿಗೆ ಹೇಳುವುದು ಸಾಧ್ಯವಿಲ್ಲ. ಹೇಳಲೂಬಾರದು ಎಂದು ಆತ್ರೆ ಪ್ರಶ್ನೆಯಾಂದಕ್ಕೆ ಉತ್ತರಿಸಿದರು.
ಪ್ರಸಕ್ತ ವಿತ್ತ ವರ್ಷದಲ್ಲಿ ಡಿಆರ್ಡಿಒ 700 ವಿಜ್ಞಾನಿಗಳನ್ನು ನೇಮಿಸಿಕೊಳ್ಳಲಿದೆ. ಕಳೆದ ಮೂರು ವರ್ಷಗಳಲ್ಲಿ 331 ವಿಜ್ಞಾನಿಗಳು ಈ ಸಂಸ್ಥೆಯನ್ನು ಬಿಟ್ಟು ಹೋಗಿದ್ದು, ಸಂಶೋಧನೆ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಅದನ್ನು ಭರಿಸಲು ಹೊಸ ನೇಮಕಾತಿಗೆ ಯೋಚಿಸಿದ್ದೇವೆ. ಇದರಿಂದ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆಯಲಿದೆ ಎಂದರು.
ರಕ್ಷಣಾ ವ್ಯವಸ್ಥೆ ಜಾಲಕ್ಕೆ ಸೈಬರ್ ಭಯೋತ್ಪಾದಕರ ದಾಳಿ ಅತಿಯಾಗಿದೆಯಾ ಎಂಬ ಪ್ರಶ್ನೆಗೆ, ಹಾಗೇನೂ ಇಲ್ಲ. ಮೂರ್ಖರನ್ನಾಗಿಸುವಂಥಾ ಸಂವಹನೆಯಿಂದ ಪೂರ್ಣ ಮುಕ್ತವಾಗಲು ಯಾವುದೇ ದಾರಿಯಿಲ್ಲ. ಆದರೂ ನಮ್ಮ ಹುಷಾರಲ್ಲಿ ನಾವಿರಬೇಕು ಎಂದು ಆತ್ರೆ ಉತ್ತರ ಕೊಟ್ಟರು.
(ಪಿಟಿಐ)
ಮುಖಪುಟ
/
ಇವತ್ತು...
ಈ
ಹೊತ್ತು...