ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿಕ್ಕಮಗಳೂರಲ್ಲಿ ಮಳೆರಾಯನ ಪ್ರೀತ್ಯರ್ಥ ಪೂರ್ಣಕುಂಭ ಪೂಜೆ

By Staff
|
Google Oneindia Kannada News

ಚಿಕ್ಕಮಗಳೂರು: ಈ ಬಾರಿ ರಾಜ್ಯದಲ್ಲಿ ತುಂಬು ಮಳೆಯಾಗಲಿದೆ ಎಂಬಂತೆ ಪೋಸು ಕೊಟ್ಟಿದ್ದ ಮಳೆರಾಯ ಇದ್ದಕ್ಕಿದ್ದಂತೆ ಮಾಯವಾಗಿರುವ ಹಿನ್ನೆಲೆಯಲ್ಲಿ ಕಡೂರಿನಲ್ಲಿ ಸೋಮವಾರ ವರುಣ ಪೂಜೆ ನಡೆಯಿತು.

101 ಮಂದಿ ಮುತ್ತೆೈದೆ ಹೆಂಗಸರು ಪೂರ್ಣ ಕುಂಭ ಕಲಶಗಳನ್ನು ತಲೆ ಮೇಲೆ ಹೊತ್ತುಕೊಂಡು ಊರಿನ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಹೊರಟರು. ಊರಿನ ದೇವರುಗಳಾದ ರೇವಣಸಿದ್ಧೇಶ್ವರ, ವೀರಭದ್ರೇಶ್ವರ, ಸಿದ್ಧೇಶ್ವರ ದೇವರ ಮೂರ್ತಿಗಳ ಮೆರವಣಿಗೆಯೂ ನಡೆಯಿತು.

ನಂತರ ಊರಿನ ಮುಖ್ಯ ದೇವಾಲಯ ಸಿದ್ಧೇಶ್ವರ ದೇವಸ್ಥಾನದಲ್ಲಿ 101 ಪೂರ್ಣ ಕುಂಭ ಕಲಶಗಳ ನೀರಿನಿಂದ ರುದ್ರಾಭಿಷೇಕ ನಡೆಯಿತು. ಊರಿನ ಮಂದಿ ಸಾಮೂಹಿಕ ಪ್ರಾರ್ಥನೆಯ ಮೂಲಕ ಮಳೆರಾಯನನ್ನು ಕರೆದರು. ಊರಿನಲ್ಲಿ ಮಳೆಯ ಅಭಾವದಿಂದಾಗಿ ಕುಡಿಯುವ ನೀರು ಹಾಗೂ ಬೇಸಾಯಕ್ಕೆ ಕಷ್ಟವೊದಗಿದೆ. ಪ್ರತಿವರ್ಷ ಬಿತ್ತನೆ ಮಾಡುವ ರೈತರು ಈ ಬಾರಿ ಮಳೆ ಬಾರದಿರುವ ಕಾರಣ ಕೈಯಲ್ಲಿ ಕೆಲಸವಿಲ್ಲದೆ ಸುಮ್ಮನೇ ಆಗಸ ನೋಡುತ್ತಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X