ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹಿರಿಯೂರಲ್ಲಿ ಪ್ರತಿಭಟನೆ : ಪೊಲೀಸರ ಗುಂಡಿಗೆ ಇಬ್ಬರ ಸಾವು
ಹಿರಿಯೂರು : ಗಲಭೆ ಎಬ್ಬಿಸಿದ ಮಂದಿಯ ಆರ್ಭಟವನ್ನು ತಹಬಂದಿಗೆ ತರಲು ಪೊಲೀಸರು ನಡೆಸಿದ ಗೋಲೀಬಾರ್ನಲ್ಲಿ ಇಬ್ಬರು ಸ್ಥಳೀಯರು ಮೃತಪಟ್ಟಿದ್ದಾರೆ.
ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ವಿದ್ಯುತ್ ಘಟಕದ ಕಾರ್ಯವನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿ, ಸುಮಾರು 10 ಸಾವಿರ ನಾಗರಿಕರು ಗುರುವಾರ ಪ್ರತಿಭಟನೆ ನಡೆಸಿದರು. ನೂಗುನುಗ್ಗಲನ್ನು ನಿಯಂತ್ರಿಸಲು ಕಾರ್ಯಪ್ರವೃತ್ತರಾದ ಪೊಲೀಸರನ್ನೇ ಪ್ರತಿಭಟನಕಾರರು ಗಾಯಗೊಳಿಸಿದರು. ಕ್ರುದ್ಧ ಪ್ರತಿಭಟನಕಾರರು ಪೊಲೀಸ್ ಕಾರ್ಯಾಲಯ ಹಾಗೂ ಅಗ್ನಿ ಶಾಮಕ ದಳದ ವಾಹನಕ್ಕೆ ಬೆಂಕಿ ಹಚ್ಚಿದಾಗ, ಪೊಲೀಸರು ಅನಿವಾರ್ಯವಾಗಿ ಗುಂಡು ಹಾರಿಸಬೇಕಾಯಿತು.
ಕರ್ನಾಟಕ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಸುಭಾಷ್ ಭರಣಿ ದೂರವಾಣಿ ಮೂಲಕ ಈ ಘಟನೆಯ ವಿವರಗಳನ್ನು ನೀಡಿದ್ದಾರೆ. ಅವರೀಗ ಹಿರಿಯೂರು ತಲುಪಿದ್ದು, ಅಲ್ಲಿ ಪರಿಸ್ಥಿತಿ ಪ್ರಕ್ಷುಬ್ಧವಾಗಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Thursday, July 25, 2002, 5:30 [IST]