ಡಿ.ಕೆ.ಶಿವಕುಮಾರ್ ನನಗೆ ಪ್ರಾಣ ಬೆದರಿಕೆ ಒಡ್ಡಿದ್ದಾರೆ-ಕಾಶಪ್ಪನವರ್
ಬೆಂಗಳೂರು : ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಆಪ್ತ ಎಂದೇ ಹೆಸರಾದ ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಅವರ ವರ್ತನೆಯ ವಿರುದ್ಧ ಮತ್ತೆ ಅಪಸ್ವರ ಕೇಳಿಬಂದಿದ್ದು , ಈ ಬಾರಿ- ಮಾಜಿ ಸಚಿವರೊಬ್ಬರು ಡಿಕೆಸಿ ವಿರುದ್ಧ ಆರೋಪ ಹೊರಿಸಿರುವುದು ವಿಶೇಷ.
ಸಚಿವ ಡಿ.ಕೆ.ಶಿವಕುಮಾರ್ ಅವರು ತಮಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಇತ್ತೀಚಿನ ಸಂಪುಟ ಪುನರ್ರಚನೆಯಲ್ಲಿ ಮಂತ್ರಿ ಸ್ಥಾನ ಕಳಕೊಂಡ ಬಾಗಲಕೋಟೆ ಜಿಲ್ಲೆ ಹುನಗುಂದ ಶಾಸಕ ಎಸ್.ಆರ್.ಕಾಶಪ್ಪನವರ್ ಪೊಲೀಸ್ ರಕ್ಷಣೆ ಕೋರಿದ್ದಾರೆ.
ಜುಲೈ 17 ರಂದು ವಿಧಾನಸಭೆಯ ಮಂತ್ರಿಗಳ ಮೊಗಸಾಲೆಯಲ್ಲಿ ಶಿವಕುಮಾರ್ ತಮಗೆ ಪ್ರಾಣ ಬೆದರಿಕೆಯ ಬೆದರಿಕೆ ಒಡ್ಡಿದ್ದರು ಎಂದು ವಿಧಾನ ಸಭಾಧ್ಯಕ್ಷ ಎಂ.ವಿ.ವೆಂಕಟಪ್ಪ ಅವರಿಗೆ ನೀಡಿರುವ ದೂರಿನಲ್ಲಿ ಕಾಶಪ್ಪನವರ್ ತಿಳಿಸಿದ್ದಾರೆ. ದೂರು ಸ್ವೀಕರಿಸಿದ ನಂತರ ದೂರವಾಣಿ ಮೂಲಕ ಕಾಶಪ್ಪನವರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿರುವ ವೆಂಕಟಪ್ಪ - ಆರೋಪದ ಕುರಿತು ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ ಎಂದು ವಿಧಾನಸಭೆ ಮೊಗಸಾಲೆಯ ಮೂಲಗಳು ತಿಳಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...