ಜುಲೈ 22ರಿಂದ ಶಿವಮೊಗ್ಗ ಅಡಿಕೆ ಮಾರುಕಟ್ಟೆ ಕಾರ್ಯ ಸ್ಥಗಿತ ?
ಶಿವಮೊಗ್ಗ : ಅಡಿಕೆ ವ್ಯಾಪಾರದ ಪ್ರಮುಖ ಕೇಂದ್ರವಾದ ಶಿವಮೊಗ್ಗದಲ್ಲಿ ಜುಲೈ 22ರಿಂದ ಅಡಿಕೆ ವ್ಯಾಪಾರ ನಡೆಯುವುದು ಅನಿಶ್ಚಿತವಾಗಿದೆ.
ಜಿಲ್ಲೆಯಲ್ಲಿ ಉತ್ಪಾದನೆಯಾಗುತ್ತಿರುವ ಅಡಿಕೆಯ ಅರ್ಧದಷ್ಟು ಅಡಿಕೆ ಉತ್ತರ ಪ್ರದೇಶಕ್ಕೆ ಪೂರೈಕೆಯಾಗುತ್ತಿದೆ. ಆದರೆ ಉತ್ತರ ಪ್ರದೇಶದಲ್ಲಿ ಗುಟ್ಕಾ ಮತ್ತು ಪಾನ್ ಮಸಾಲಗಳ ತಯಾರಿಕೆಯನ್ನು ನಿಷೇಧಿಸುವಂತೆ ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಅಡಿಕೆ ಮಾರುಕಟ್ಟೆಯ ವ್ಯವಹಾರ ಸದ್ಯಕ್ಕೆ ಸ್ಥಗಿತಗೊಳ್ಳುವ ನಿರೀಕ್ಷೆಯಿದೆ.
ಶಿವಮೊಗ್ಗದಿಂದ ಮಹಾರಾಷ್ಟ್ರಕ್ಕೆ ಶೇ 20ರಷ್ಟು ಪ್ರಮಾಣದ ಅಡಿಕೆ ರಫ್ತಾಗುತ್ತಿತ್ತು ಆದರೆ ಮಹಾರಾಷ್ಟ್ರಾ ರಾಜ್ಯದಲ್ಲಿ ಈಗಾಗಲೇ ಗುಟ್ಕಾ ನಿಷೇಧಾಜ್ಞೆ ಜಾರಿಗೆ ಬಂದಿದೆ. ಗುಟ್ಕಾ ಬಗ್ಗೆ ದೇಶಾದ್ಯಂತ ಸಮಾನ ನೀತಿ ಇಲ್ಲದೇ ಇರುವುದನ್ನು ವಿರೋಧಿಸಿ ಅಡಿಕೆ ಬೆಳೆಗಾರರು ಮತ್ತೊಂದು ಹೋರಾಟ ಹಮ್ಮಿಕೊಳ್ಳುವ ಯೋಚನೆಯಲ್ಲಿದ್ದಾರೆ. ಮುಖ್ಯವಾಗಿ ಅಡಿಕೆ ಬೆಳೆಗಾರರ ಸಂಘಟನೆಗಳು ಹೋರಾಟದ ನೇತೃತ್ವ ವಹಿಸಬೇಕು. ಅಡಿಕೆ ಬೆಳೆಯುವ ಪ್ರದೇಶದ ಶಾಸಕರು ಮತ್ತು ಸಂಸತ್ ಸದಸ್ಯರು ಅಡಿಕೆ ಬೆಳೆಗಾರ ಹಿತರಕ್ಷಣೆಗೆ ರಾಜ್ಯ ಮತ್ತು ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಅಡಿಕೆ ಬೆಳೆಗಾರರೂ ಆಗಿರುವ ಶಾಸಕ ವಡ್ನಾಳ್ ರಾಜಣ್ಣ ಅವರು ಹೇಳಿಕೆಯಾಂದರಲ್ಲಿ ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...