ಕೊಪ್ಪಳದಲ್ಲಿ ಅಂಬೇಡ್ಕರ್ ಮೂರ್ತಿಗೆ ಅವಮಾನ ಮಾಡಿದ ದಲಿತರ ಬಂಧನ
ಗುಲ್ಬರ್ಗ: ಕೊಪ್ಪಳದಲ್ಲಿ ಇತ್ತೀಚೆಗೆ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಮಾಡಿದ ಆರೋಪಿಗಳು ದಲಿತ ವರ್ಗಕ್ಕೆ ಸೇರಿದವರು ಎಂದು ತಿಳಿದು ಬಂದಿದ್ದು ಈ ಸಂಬಂಧ ಎಂಟು ಮಂದಿಯನ್ನು ಬಂಧಿಸಲಾಗಿದೆ.
ರಾಜ್ಯ ಈಶಾನ್ಯ ವಲಯದ ಐಜಿಪಿ ಕೆಂಪಯ್ಯ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಕಾಶಪ್ಪ, ಮರ್ಧಾನಪ್ಪ, ಮಂಜಪ್ಪ, ಗವಿಸಿದ್ಧಪ್ಪ, ಬಸವರಾಜ್, ಸತೀಶ್, ಪ್ರವೀಣ್ ಚಕ್ರಿ, ಫಕೀರಪ್ಪ ಎಂಬವರನ್ನು ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.
ಆರೋಪಿಗಳನ್ನು ನ್ಯಾಯಾಲಯ ಕಸ್ಟಡಿಗೆ ಒಪ್ಪಿಸಲಾಗಿದೆ. ಇನ್ನೊಬ್ಬ ಆರೋಪಿಯೂ ಕೂಡ ದಲಿತ ವರ್ಗಕ್ಕೆ ಸೇರಿದವನಾಗಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ.
ದಲಿತ ಸಮುದಾಯವನ್ನು ಮುಸ್ಲಿ ಸಮುದಾಯದ ವಿರುದ್ಧ ಎತ್ತಿ ಕಟ್ಟುವ ಉದ್ದೇಶದಿಂದ ಮರ್ಧಾನಪ್ಪ ಎಂಬಾತ ಅಂಬೇಡ್ಕರ್ ಪ್ರತಿಮೆಗೆ ಅಪಚಾರ ಎಸಗುವ ಯೋಜನೆ ರೂಪಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಹಿನ್ನೆಲೆ : ಜೂನ್ 30ರಂದು ಅಂಬೇಡ್ಕರ್ ಭವನದಲ್ಲಿ ಮುಸ್ಲಿಂ ಸಮುದಾಯದ ಮದುವೆ ತಂಡವೊಂದು ತಂಗಿತ್ತು. ಈ ಸಂದರ್ಭದಲ್ಲಿ ಮುಸ್ಲಿಂ ಮಹಿಳೆ ಮತ್ತು ಮರ್ಧಾನಪ್ಪ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳವಾಗಿತ್ತು. ಮಹಿಳೆಯ ಮೇಲೆ ಕೈ ಮಾಡಿದ ಮಾರ್ಧಾನಪ್ಪನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಮರುದಿನ ಮರ್ಧಾನಪ್ಪನ ಮನೆಯ ವಸ್ತುಗಳನ್ನು ಮುಸ್ಲಿಮರು ಚೆಲ್ಲಾಪಿಲ್ಲಿ ಮಾಡಿದರು. ಆದರೂ ಮರ್ಧಾನಪ್ಪನ ಸಹಾಯಕ್ಕೆ ದಲಿತವರ್ಗದವರು ಬರದೇ ಇರುವುದರಿಂದ ಸಿಟ್ಟುಗೊಂಡು ಆತ ಈ ಯೋಜನೆ ರೂಪಿಸಿದ್ದಾನೆ ಎಂದು ವಿಚಾರಣೆಯ ಸಂದರ್ಭದಲ್ಲಿ ತಿಳಿದು ಬಂದಿದೆ.
(ಇನ್ಫೋ ವಾರ್ತೆ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...