ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಗದ್ದುಗೆ ಸಿಕ್ಕ ಬಗಲಿಗೇ ಜೀವ ಬೆದರಿಕೆ, ಕಲಾಂಗೆ ಬಿಗಿ ಭದ್ರತೆ
ನವದೆಹಲಿ : ಭಾರತದ ಹೊಸ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂಗೆ ಜೀವ ಬೆದರಿಕೆ !ಬೆದರಿಕೆ ಹಾಕಿರುವವರಾರು? ಹೆಚ್ಚುವರಿ ಪೊಲೀಸ್ ಆಯುಕ್ತ ಜೆ.ಕೆ.ಶರ್ಮ ಉತ್ತರ ಹೇಳಲು ಒಲ್ಲೆ ಅನ್ನುತ್ತಾರೆ. ಹೆಚ್ಚು ಕೆದಕಿದರೆ, ಶ್... ಎಂದು ನಡೆಯುತ್ತಾರೆ.
ಹಿಂದೂ ಪತ್ರಿಕೆಯ ವರದಿ ಪ್ರಕಾರ ಸಂಘಟನೆಗಳಾದ ಲಷ್ಕರ್- ಎ- ತೊಯಿಬಾ ಮತ್ತು ಹಿಬ್ಬುಲ್ ಮುಜಾಹಿದ್ದೀನ್ ಕಡೆಯವರು ಈ ಬೆದರಿಕೆ ಕರೆಗಳನ್ನು ಮಾಡಿದ್ದಾರೆ. ಕಲಾಂ ಅವರ ಆಜೂಬಾಜು ಇದೀಗ ದಿನದ ಇಪ್ಪತ್ತನಾಲ್ಕೂ ತಾಸು ಪೊಲೀಸರೇ ಪೊಲೀಸರು. ಅವರ ಕಾವಲಿಗೆ ನಿಂತಿರುವ ಪೊಲೀಸರ ಪೈಕಿ ಉನ್ನತ ಅಧಿಕಾರಿಗಳೇ ಹೆಚ್ಚು. ಖುದ್ದು ಜೆ.ಕೆ.ಶರ್ಮ ಕಾವಲು ಪರಿಶೀಲನೆಗೆ ನಿಂತಿದ್ದಾರೆ.
(ಏಜೆನ್ಸೀಸ್)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...
Comments
Story first published: Thursday, July 18, 2002, 5:30 [IST]