ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಷಿಪಣಿ ವಿಜ್ಞಾನಿ ಎಪಿಜೆ ಅಬ್ದುಲ್‌ ಕಲಾಂ ಭಾರತದ 12ನೇ ರಾಷ್ಟ್ರಪತಿ

By Staff
|
Google Oneindia Kannada News

APJ Abdul Kalamನವದೆಹಲಿ : ಭಾರತದ 12ನೆಯ ರಾಷ್ಟ್ರಪತಿಯಾಗಿ ಕ್ಷಿಪಣಿ ತಂತ್ರಜ್ಞಾನದ ಪಿತಾಮಹ ಎಪಿಜೆ ಅಬ್ದುಲ್‌ ಕಲಾಂ ಆಯ್ಕೆಯಾಗಿದ್ದಾರೆ.

ಅಧಿಕಾರಾರೂಢ ಎನ್‌ಡಿಎ ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣಾ ಕಣಕ್ಕಿಳಿದಿದ್ದ ಕಲಾಂ, ಗಾದಿಯ ಪೋಟಿಯಲ್ಲಿದ್ದ ಕ್ಯಾಪ್ಟನ್‌ ಲಕ್ಷ್ಮಿ ಸೆಹೆಗಲ್‌ ಅವರಿಗಿಂತ ಭಾರೀ ಮತಗಳನ್ನು ಪಡೆದು, ಭಾರತದ 12ನೆಯ ರಾಷ್ಟ್ರಪತಿಯಾಗಿ ಹೊಮ್ಮಿದ್ದಾರೆ.

ಸಂಸದೀಯ ವ್ಯವಹಾರಗಳ ಸಚಿವ ಪ್ರಮೋದ್‌ ಮಹಾಜನ್‌ ಖುದ್ದು ಕಲಾಂ ಅವರ ಬಳಿಗೆ ತೆರಳಿ ಅವರನ್ನು ಅಭಿನಂದಿಸಿದ್ದಾರೆ ಎಂದು ಆಡಳಿತದ ಮೂಲಗಳು ಸ್ಪಷ್ಟಪಡಿಸಿವೆ.

ಒಂದು ಲಕ್ಷ ಮಂದಿಗೆ ಇನ್ನೆರಡು ವರ್ಷಗಳಲ್ಲಿ ಶಿಕ್ಷಣ ಕೊಡುವುದು ನನ್ನ ಮೊದಲ ನಡೆ. ಇನ್ನು 20 ವರ್ಷಗಳಲ್ಲಿ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸುವುದು ನನ್ನ ಗುರಿ ಎಂದು ಅಬ್ದುಲ್‌ ಕಲಾಂ ಹೇಳಿದ್ದಾರೆ.

(ಏಜೆನ್ಸೀಸ್‌)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X