ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಮಂಡ್ಯ ರೈತರ ಕಬ್ಬು ಜುಲೈ 24ರಿಂದ ಸಕ್ಕರೆ ಕಾರ್ಖಾನೆ ಯಂತ್ರದ ಬಾಯಿಗೆ’
ಬೆಂಗಳೂರು : ಮಂಡ್ಯ ಸಕ್ಕರೆ ಕಾರ್ಖಾನೆಯ ಯಂತ್ರಗಳಿಂದ ಕಬ್ಬಿನ ರಸ ತೆಗೆಯುವ ಕೆಲಸಕ್ಕೆ ಜುಲೈ 24ರಿಂದ ಮತ್ತೆ ಚಾಲನೆ ದೊರೆಯಲಿದೆ ಎಂದು ಸಕ್ಕರೆ ಖಾತೆ ಸಚಿವ ಎಂ.ಮಹದೇವ್ ಮಂಗಳವಾರ ವಿಧಾನಸಭೆಗೆ ತಿಳಿಸಿದರು.
ಎಷ್ಟು ದಿನವಾದರೂ ಕಾರ್ಖಾನೆಯಲ್ಲಿ ಕಬ್ಬಿನ ರಸ ತೆಗೆಯುವ ಕೆಲಸ ಶುರು ಮಾಡುತ್ತಿಲ್ಲ. ಯಾವಾಗ ಶುರು ಮಾಡಲಿದ್ದಾರೆ ಎಂಬ ಬಗ್ಗೆ ಕಾರ್ಖಾನೆಯವರೂ ನಿಖರವಾಗಿ ಹೇಳುತ್ತಿಲ್ಲ ಎಂದು ಮಂಡ್ಯ ಸಕ್ಕರೆ ಕಾರ್ಖಾನೆಯನ್ನು ನೆಚ್ಚಿಕೊಂಡು ಕಬ್ಬು ಬೆಳೆದ ರೈತರ ಅಳಲನ್ನು ಕಾಂಗ್ರೆಸ್ನ ಎಂ.ಎಸ್.ಆತ್ಮಾನಂದ, ಸಚಿವರ ಗಮನಕ್ಕೆ ತಂದರು.
ಸದ್ಯದಲ್ಲೇ ರೈತ ಮುಖಂಡರ ಮತ್ತು ಕಾರ್ಖಾನೆಯ ಆಡಳಿತ ಮಂಡಳಿಯವರ ಸಭೆ ನಡೆಸಿ, ಕಬ್ಬಿನ ಬೆಂಬಲ ಬೆಲೆ ನಿರ್ಧರಿಸಲಾಗುವುದು. ಜುಲೈ 24ರಿಂದ ಕಬ್ಬಿನ ರಸ ತೆಗೆಯುವ ಕೆಲಸಕ್ಕೆ ಚಾಲನೆ ದೊರೆಯಲಿದೆ ಎಂದು ಮಹದೇವ್ ಭರವಸೆ ಕೊಟ್ಟರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Tuesday, July 16, 2002, 5:30 [IST]