ದೇಶದ ಏಕೈಕ ಚಿನ್ನ ಉತ್ಪಾದಕ ಹಟ್ಟಿ ಗಣಿ ಖಾಸಗೀಕರಣಕ್ಕೆ ವಿರೋಧ
ಬೆಂಗಳೂರು : ದೇಶದ ಏಕೈಕ ಚಿನ್ನ ಉತ್ಪಾದಕನಾದ ಹಟ್ಟಿ ಚಿನ್ನದ ಗಣಿ ಖಾಸಗೀಕರಣಗೊಳಿಸುವ ಸರ್ಕಾರದ ನಿರ್ಧಾರವನ್ನು ಕಂಪನಿಯ ಕಾರ್ಯ ನಿರ್ವಾಹಕ ನಿರ್ದೇಶಕ ಕೆ.ಎಲ್.ನೇಗಿ ತೀವ್ರವಾಗಿ ವಿರೋಧಿಸಿದ್ದಾರೆ.
ಹಟ್ಟಿ ಚಿನ್ನದ ಗಣಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಪ್ರಸ್ತುತ ಸಂಸ್ಥೆಯಲ್ಲಿ 4 ಸಾವಿರ ಮಂದಿ ಕಾರ್ಯ ನಿರ್ವಹಿಸುತ್ತಿದ್ದು, ಗಣಿಯನ್ನು ಖಾಸಗೀಕರಣಗೊಳಿಸಿದರೆ ಶೇ.50 ರಷ್ಟು ನೌಕರರನ್ನು ಕಡಿತಗೊಳಿಸಬೇಕಾಗುತ್ತದೆ. ಇಲ್ಲಿನ ನೌಕರರು ಪರ್ಯಾಯ ಉದ್ಯೋಗ ಹುಡುಕಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ . ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯನ್ನು ಖಾಸಗೀಕರಣಗೊಳಿಸುವುದಾದರೂ ಏಕೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ನೇಗಿ ಪ್ರಶ್ನಿಸಿದ್ದಾರೆ.
ಪ್ರಸಕ್ತ ಹಣಕಾಸಿನ ವರ್ಷದಲ್ಲಿ 3 ಟನ್ ಬಂಗಾರ ಉತ್ಪಾದಿಸುವ ಗುರಿಯನ್ನು ಹೊಂದಿರುವ ಹಟ್ಟಿ ಚಿನ್ನದ ಗಣಿ ಕಂಪನಿ ಲಿ.(ಎಚ್ಜಿಎಂಎಲ್) , ಇದೇ ವೇಳೆಯಲ್ಲಿ ವಿಸ್ತರಣೆ ಹಾಗೂ ಆಧುನೀಕರಣ ಯೋಜನೆಗಳನ್ನು ಹಮ್ಮಿಕೊಂಡಿದೆ. 55 ವರ್ಷ ಪ್ರಾಯದ ಹಾಗೂ ದೇಶದ ಏಕೈಕ ಚಿನ್ನ ಉತ್ಪಾದಕ ಎನ್ನುವ ಅಗ್ಗಳಿಕೆಯ ಗಣಿಗೆ ಆಧುನೀಕರಣದ ಲೇಪ ಕೊಡಲು ನಿರ್ಧರಿಸಿದ್ದು, ಪ್ರಸ್ತುತ ಇರುವ 1200 ಮೆಟ್ರಿಕ್ ಟನ್ ದೈನಿಕ ಉತ್ಪಾದನೆಯನ್ನು 1700-1800 ಮೆಟ್ರಿಕ್ ಟನ್ಗೆ ಹೆಚ್ಚಿಸಲಾಗುವುದು.
2001-02
ನೇ
ಸಾಲಿನಲ್ಲಿ
ಆರ್ಥಿಕ
ವರ್ಷದಲ್ಲಿ
2423
ಕೇಜಿ
ಚಿನ್ನ
ಉತ್ಪಾದಿಸಿರುವ
ಕಂಪನಿ
110
ಕೋಟಿ
ರುಪಾಯಿಗಳ
ವಹಿವಾಟು
ನಡೆಸುವ
ಮೂಲಕ
25
ಕೋಟಿ
ರುಪಾಯಿ
ಲಾಭ
ಗಳಿಸಿದೆ.
ಪ್ರಸಕ್ತ
ಆರ್ಥಿಕ
ವರ್ಷದಲ್ಲಿ
135
ಕೋಟಿ
ರುಪಾಯಿ
ವಹಿವಾಟು
ನಡೆಸುವ
ಮೂಲಕ
40
ಕೋಟಿ
ರುಪಾಯಿ
ಲಾಭ
ಹೊಂದುವ
ಗುರಿ
ಹೊಂದಲಾಗಿದೆ
ಎಂದು
ನೇಗಿ
ತಿಳಿಸಿದ್ದಾರೆ.
(ಪಿಟಿಐ)
ಪೂರಕ
ಓದಿಗೆ-
ಮುಖಪುಟ
/
ಇವತ್ತು...
ಈ
ಹೊತ್ತು...