ತರಕಾರಿ ಮಾರ್ಕೆಟ್ನಲ್ಲಿ ಕೋಟಿ ರು. ಹಾವು-ಉಡದ ಚರ್ಮ
40
ಸಾವಿರ
ಹಾವಿನ
ಚರ್ಮ
+30
ಸಾವಿರ
ಉಡದ
ಚರ್ಮ
=
1
ಕೋಟಿ
ರುಪಾಯಿ
ಮೌಲ್ಯ
!
ಬೆಂಗಳೂರಿನ
ಆರ್.ಎಂ.ಸಿ.
ಮಾರುಕಟ್ಟೆಯಲ್ಲಿ
ತರಕಾರಿ
ಖರೀದಿಗೆ
ಬಂದಿದ್ದ
ಲಾರಿಯಲ್ಲಿ
ಇದಿಷ್ಟು
ಮಾಲನ್ನು
ವಶಪಡಿಸಿಕೊಂಡ
ನಂದಿನಿ
ಬಡಾವಣೆ
ಪೊಲೀಸರಿಗೆ
ಚಣಕಾಲ
ಕಕ್ಕಾಬಿಕ್ಕಿ.
ಈ
ಪಾಟಿ
ಹಾವು-ಉಡಗಳ
ಚರ್ಮ
ತಂದವನು
ಆಂಧ್ರಪ್ರದೇಶದ
ಮದನಪಲ್ಲಿಯ
ಕಂದಕೂರ್
ವಾಸಿ
ಸೈಫುಲ್ಲಾ
(27).
ಈಗಾತ
ಪೊಲೀಸರ
ಬಂಧಿ.
ಚರ್ಮಗಳನ್ನು ಚೆನ್ನೈಗೆ ಸಾಗಿಸುವುದು, ಅಲ್ಲಿಂದ ಸಿಂಗಪುರ ಮತ್ತು ಪ್ಯಾರಿಸ್ಗೆ ಸಾಗಿಸುವುದು ಆರೋಪಿಯ ಉದ್ದೇಶವಾಗಿತ್ತು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. ಬೆಲ್ಟ್ , ವ್ಯಾನಿಟಿ ಬ್ಯಾಗ್, ಚಪ್ಪಲಿ ಹಾಗೂ ಪರ್ಸು ತಯಾರಿಕೆಗೆ ಈ ಚರ್ಮ ಬಳಸಲಾಗುತ್ತದೆ.
ಸೈಫುಲ್ಲಾ ಬಂಧನದೊಂದಿಗೆ ವನ್ಯ ಪ್ರಾಣಿಗಳ ಚರ್ಮ ಮಾರಾಟದ ಬೃಹತ್ ಜಾಲದ ವಾಸನೆ ಪೊಲೀಸರಿಗೆ ಬಡಿದಿದ್ದು , ಮದನಪಲ್ಲಿಯ ನವಾಬ್ ಮತ್ತು ಚೆನ್ನೈನ ಸಲೀಂ ಎಂಬುವರನ್ನು ಹುಡುಕಲಾಗುತ್ತಿದೆ.
ಆಂಧ್ರಪ್ರದೇಶದ ಕದಿರಿ, ಗೋರಂಟ್ಲ , ಪೆನಗೊಂಡ, ಮದನಪಲ್ಲಿ ಹಾಗೂ ತಮಿಳುನಾಡು ಮತ್ತು ಕರ್ನಾಟಕದ ಹಕ್ಕಿಪಿಕ್ಕಿ ಜನಾಂಗದ ಮೂಲಕ ಈ ಆರೋಪಿಗಳು ಹಾವು ಉಡದ ಚರ್ಮ ಸಂಗ್ರಹಿಸುತ್ತಿದ್ದರು ಎನ್ನಲಾಗಿದೆ. (ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...