ಜಾವಗಲ್ ಶ್ರೀನಾಥ್ ಬೌನ್ಸರ್ಗೆ ರಾಜೇಂದ್ರ ಪ್ರಸಾದ್ ಎತ್ತಂಗಡಿ
ಮೈಸೂರು: ಮೈಸೂರು ಎಕ್ಸ್ಪ್ರೆಸ್ ಜಾವಗಲ್ ಶ್ರೀನಾಥ್ ಜೊತೆ ಅನುಚಿತವಾಗಿ ನಡೆದುಕೊಂಡ ಪೋಲಿಸ್ ಇನ್ಸ್ಪೆಕ್ಟರ್ ರಾಜೇಂದ್ರ ಪ್ರಸಾದ್ರನ್ನು ವರ್ಗಾಯಿಸಲಾಗಿದೆ ಎಂದು ಪೋಲಿಸ್ ಮೂಲಗಳು ಬುಧವಾರ ತಿಳಿಸಿವೆ.
ಮಂಗಳವಾರ ರಾತ್ರಿಯೇ ಈ ದೆಸೆಯಲ್ಲಿ ತೀರ್ಮಾನ ಖಚಿತವಾಗಿತ್ತಾದರೂ ಬುಧವಾರ ಅಧಿಕೃತವಾಗಿ ಈ ವಿಷಯ ಹೊರಬಿದ್ದಿದೆ. ರಾಜೇಂದ್ರ ಪ್ರಸಾದರನ್ನು ಎಲ್ಲಿಗೆ ವರ್ಗಾಯಿಸಲಾಗಿದೆ ಎಂಬುದನ್ನು ಇನ್ನೂ ತೀರ್ಮಾನಿಸಲಾಗಿಲ್ಲ.
ಕರ್ನಾಟಕದ ಗೃಹ ಇಲಾಖೆಯು ಮಂಗಳವಾರ ಮೈಸೂರಿನ ಪೋಲಿಸ್ ಆಯುಕ್ತರಿಗೆ ಜಾವಗಲ್ ಶ್ರೀನಾಥ್ರ ಕಹಿ ಘಟನೆಯ ವಿಸ್ತುತ ವರದಿಯನ್ನು ಕಳಿಸಿ ಕೊಡುವಂತೆ ಕೋರಿತ್ತು. ವಿಧಾನ ಸಭೆಯಲ್ಲಿ ಈ ವಿಷಯದ ಮೇಲಿನ ಪ್ರಶ್ನೆಯಾಂದಕ್ಕೆ ಉತ್ತರಿಸಿದ ಗೃಹ ಮಂತ್ರಿ ಮಲ್ಲಿಕಾರ್ಜುನ ಖರ್ಗೆ, ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆಯಿತ್ತಿದ್ದರು.
ಕಳೆದ ಶನಿವಾರ ತಮ್ಮ ವಾಹನ ನೋಂದಣಿ ಪ್ರಮಾಣ ಪತ್ರ (ಆರ್.ಸಿ ಪುಸ್ತಕ) ಕಳೆದು ಹೋಗಿರುವುದಕ್ಕೆ ದೂರು ಕೊಡಲು ಶ್ರೀನಾಥ್ ಮೈಸೂರಿನ ಕುವೆಂಪುನಗರದ ಪೋಲಿಸ್ ಠಾಣೆಗೆ ಹೋದಾಗ, ರಾಜೇಂದ್ರ ಪ್ರಸಾದ್ ಅನುಚಿತವಾಗಿ ನಡೆದುಕೊಂಡಿದ್ದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...