‘ಜಾತಿ ಹೆಸರಲ್ಲಿ ಶಾಂತಿ ಕದಡುವವರ ವಿರುದ್ಧ ವಜ್ರಮುಷ್ಠಿ ಪ್ರಹಾರ’
ಬೆಂಗಳೂರು : ಕೊಪ್ಪಳದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಕೆಲವು ಕಿಡಿಗೇಡಿಗಳು ಎಸಗಿರುವ ಅವಮಾನದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ , ಜಾತಿ ಆಧಾರದಲ್ಲಿ ಜನತೆಯನ್ನು ಒಡೆಯಲು ಪ್ರಯತ್ನಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತದೆಂದು ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ (ಜು.09) ಕೊಪ್ಪಳದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಅವಮಾನ ಎಸಗಿರುವ ಕಿಡಿಗೇಡಿಗಳ ದುಷ್ಕೃತ್ಯವನ್ನು ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಅಪರಾಧಿಗಳನ್ನು ಪತ್ತೆ ಹಚ್ಚಿ ಅವರನ್ನು ಕಾನೂನು ಪ್ರಕಾರ ತೀವ್ರ ಶಿಕ್ಷೆಗೆ ಗುರಿ ಪಡಿಸಲಾಗುವುದು ಎಂದು ಗುರುವಾರ ವಿಧಾನ ಪರಿಷತ್ನಲ್ಲಿ ಕೃಷ್ಣ ಪ್ರಕಟಿಸಿದರು.
ಕೊಪ್ಪಳ ಪ್ರಕರಣಕ್ಕೆ ಪ್ರತಿಯಾಗಿ ಹುಬ್ಬಳ್ಳಿಯಲ್ಲಿ ಭುಗಿಲೆದ್ದ ಹಿಂಸಾಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಪರಿಸ್ಥಿತಿಯನ್ನು ಸ್ವಾರ್ಥಕ್ಕೆ ಬಳಸಿಕೊಳ್ಳದಿರುವಂತೆ ಕೋಮು ಶಕ್ತಿಗಳಿಗೆ ಕಠಿಣವಾಗಿ ಹೇಳಿದರು. ರಾಜ್ಯದಲ್ಲಿ ಸೌಹಾರ್ದತೆಯನ್ನು ಕದಡಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಅಂಥ ಶಕ್ತಿಗಳ ವಿರುದ್ಧ ಸರ್ಕಾರ ಕಠಿಣ ನಿಲುವು ತಾಳಲಿದೆ ಎಂದರು.
ಸಂಯುಕ್ತ
ಜನತಾದಳದ
ಬಿ.ಸೋಮಶೇಖರ್
ಹಾಗೂ
ಭಾರತೀಯ
ಜನತಾ
ಪಕ್ಷದ
ಜಗದೀಶ
ಶೆಟ್ಟರ್
ಇತರರು
ಕೊಪ್ಪಳದ
ಘಟನೆಯನ್ನು
ಸದನದಲ್ಲಿ
ಪ್ರಸ್ತಾಪಿಸಿ
ಖಂಡಿಸಿ
ಮಾತನಾಡಿದರು.
ತಪ್ಪಿತಸ್ಥರ
ವಿರುದ್ಧ
ಸರ್ಕಾರ
ಕಠಿಣ
ಕ್ರಮ
ಕೈಗೊಳ್ಳಬೇಕೆಂದೂ
ವಿರೋಧ
ಪಕ್ಷದ
ಸದಸ್ಯರು
ಮುಖ್ಯಮಂತ್ರಿಗಳನ್ನು
ಆಗ್ರಹಿಸಿದರು.
(ಪಿಟಿಐ)
ಮುಖಪುಟ / ಕೃಷ್ಣ ಗಾರುಡಿ