ಶ್ರೀನಾಥ್ಗೆ ಅವಮಾನ ಮಾಡಿದ ಪೊಲೀಸ್ ಅಧಿಕಾರಿ ಮನೆಗೆ ?
ಬೆಂಗಳೂರು : ಅಂತರರಾಷ್ಟ್ರೀಯ ಖ್ಯಾತಿಯ ಕ್ರಿಕೆಟ್ ಪಟು ಜಾವಗಲ್ ಶ್ರೀನಾಥ್ಗೆ ಅವಮಾನ ಮಾಡಿದ ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ನಿರ್ಧರಿಸಿದ್ದು , ಸೇವೆಯಿಂದ ವಜಾಗೊಳಿಸುವುದು ಸೇರಿದಂತೆ ಎಲ್ಲ ಸಾಧ್ಯತೆಗಳನ್ನು ಮುಕ್ತವಾಗಿ ಇರಿಸಿಕೊಳ್ಳಲಾಗಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.
ಶ್ರೀನಾಥ್ರೊಂದಿಗೆ ಲಘುವಾಗಿ ವರ್ತಿಸಿದ ಪೊಲೀಸ್ ಅಧಿಕಾರಿಯ ವರ್ತನೆಯ ಬಗ್ಗೆ ಸಾಕಷ್ಟು ದೂರುಗಳಿವೆ. ಅಧಿಕಾರಿಯ ವರ್ತನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಮಂಗಳವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಶಾಸಕ ಎ.ರಾಮದಾಸ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಖರ್ಗೆ ಹೇಳಿದರು.
ಕಳೆದ 20 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿದ್ದರೂ ತನ್ನ ಅನುಚಿತ ವರ್ತನೆಯಿಂದಾಗಿ ಈ ಅಧಿಕಾರಿ ಬಡ್ತಿ ಪಡೆದಿಲ್ಲ . ಶ್ರೀನಾಥ್ ಪ್ರಕರಣದ ಕುರಿತಂತೆ ಗೃಹ ಇಲಾಖೆ ಮೈಸೂರು ಪೊಲೀಸರಿಂದ ವರದಿಯನ್ನು ಕೇಳಿದೆ ಎಂದು ಖರ್ಗೆ ಸ್ಪಷ್ಟಪಡಿಸಿದರು.
ಈ
ನಡುವೆ
ಶ್ರೀನಾಥ್
ಪ್ರಕರಣ
ಹೊಸ
ತಿರುವು
ಪಡೆದುಕೊಂಡಿದ್ದು-
ಪತ್ರಿಕೆಗಳಲ್ಲಿ
ಬಂದಿರುವ
ಸುದ್ದಿಯೆಲ್ಲ
ಸತ್ಯದೂರವಾದವು.
ಶ್ರೀನಾಥ್
ಅವರೇ
ಫೋನ್
ಮಾಡಿ
ತಮಗೆ
ಈ
ವಿಷಯ
ತಿಳಿಸಿದ್ದಾರೆ
ಎಂದು
ಮೈಸೂರು
ಪೊಲೀಸ್
ಕಮೀಷನರ್
ತಿಳಿಸಿದ್ದಾರೆ.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಇವತ್ತು...
ಈ
ಹೊತ್ತು...