ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಗಾಗಿ ಸ್ವಂತ ಮುಂಗೈಯನ್ನು ಶ್ರೀರಾಮನಿಗೊಪ್ಪಿಸಿದ ಭೂಪ

By Staff
|
Google Oneindia Kannada News

ತುಮಕೂರು: ಮಳೆ ಬರುತ್ತದೆ ಎಂದು ನಂಬಿ, ಕಾದು ಕಾದು ರೋಸಿಹೋದ ವ್ಯಕ್ತಿಯಾಬ್ಬ ತನ್ನ ಎಡಗೈಯ ಮುಂಗೈಯನ್ನು ಕಡಿದು ಶ್ರೀರಾಮ ದೇವರಿಗೊಪ್ಪಿಸಿದ ವಿಲಕ್ಷಣ ಘಟನೆ ಇಲ್ಲಿನ ಗುಬ್ಬಿ ತಾಲೂಕಿನಲ್ಲಿ ನಡೆದಿದೆ.

ಅರಿವೇಸಂದ್ರದ ನಿವಾಸಿ, ಜಿ. ನರಸಿಂಹಯ್ಯ ಎಂಬಾತ ಮಳೆ ಬೆಳೆಯಿಲ್ಲದೆ ರೈತರು ಕಂಗಾಲಾಗಿರುವುದನ್ನು ಕಂಡು ಹತಾಶನಾಗಿದ್ದ. ಮಳೆ ಬರಲಿ ಎಂದು ಹರಕೆ ಹೊತ್ತು ತನ್ನ ಆರಾಧ್ಯ ದೈವ ಶ್ರೀರಾಮನಿಗೆ ಮುಂಗೈಯನ್ನು ಅರ್ಪಿಸಿದ್ದಾನೆ. ಶ್ರೀರಾಮ ದೇವರ ಭಾವಚಿತ್ರಕ್ಕೆ ಕೈಯ್ಯನ್ನು ತೂಗು ಹಾಕಿ ಜಿ. ನರಸಿಂಹಯ್ಯ ಪೂಜಿಸಿದ್ದಾನೆ.

ಈತನಿಗೆ ಎಂಟು ವರ್ಷದ ಹಿಂದೆ ಮದುವೆಯಾಗಿದ್ದು ದಾಂಪತ್ಯ ಮುರಿದು ಬಿದ್ದಿರುವುದರಿಂದ ಪತ್ನಿ ಮಂಜುಳಾ ಹಾಗೂ ಇಬ್ಬರು ಮಕ್ಕಳು ಬೇರೆ ಕಡೆ ವಾಸವಾಗಿದ್ದಾರೆ. ಕತ್ತರಿಸಲಾದ ಕೈಯನ್ನು ಗ್ರಾಮಸ್ಥರ ಒತ್ತಾಯದ ಮೇರೆಗೆ ಸಂಸ್ಕಾರ ಮಾಡಲಾಗಿದೆ. ದೇವರಿಗೆಂದು ಈತ ಹಾಗೆಯೇ ಬಿಟ್ಟಿದ್ದ ಅಂಟು ಜಡೆಯನ್ನು ಗ್ರಾಮಸ್ಥರು ಸೇರಿ ಕೇಶ ಮುಂಡನ ಮಾಡಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X