ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರ್ಗದತ್ತ ‘ವಿಜಯಕರ್ನಾಟಕ’; ಸರದಿಯಲ್ಲಿ ತುಮಕೂರು, ಮುಂಬಯಿ..

By Staff
|
Google Oneindia Kannada News

ಮಂಗಳೂರು : ಭಾರತದ ನಂಬರ್‌ 1 ದಿನಪತ್ರಿಕೆ ‘ವಿಜಯಕರ್ನಾಟಕ’ ದ ಯಶಸ್ವಿ ಅಭಿಯಾನ ಮುಂದುವರಿದಿದೆ.

ಪತ್ರಿಕೆಯ ಚಿತ್ರದುರ್ಗ ಆವೃತ್ತಿ ಪ್ರಾರಂಭಿಸಲು ಎಲ್ಲ ಸಿದ್ಧತೆಗಳೂ ನಡೆದಿದ್ದು , ವಿಜಯಕರ್ನಾಟಕದ ಚಿತ್ರದುರ್ಗದ ಆವೃತ್ತಿ ಆಗಸ್ಟ್‌ ತಿಂಗಳಿಂದ ಪ್ರಾರಂಭವಾಗಲಿದೆ. ನಂತರದ ಸರದಿ ತುಮಕೂರು, ಹಾಸನ ಹಾಗೂ ಮುಂಬಯಿ. ಮಂಗಳೂರಿನಲ್ಲಿ ‘ಕೆನರಾ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ’ದ ಸದಸ್ಯರನ್ನುದ್ದೇಶಿಸಿ ಸೋಮವಾರ ಮಾತನಾಡಿದ ಪತ್ರಿಕೆಯ ಮಾಲಿಕ ಹಾಗೂ ಬಿಜೆಪಿ ಸಂಸದ ವಿಜಯ ಸಂಕೇಶ್ವರ ಈ ವಿಷಯ ತಿಳಿಸಿದರು.

ಗಲ್ಫ್‌ ರಾಷ್ಟ್ರಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವುದರಿಂದ, ಗಲ್ಫ್‌ ರಾಷ್ಟ್ರಗಳಲ್ಲೂ ವಿಜಯ ಕರ್ನಾಟಕ ಪತ್ರಿಕೆಯ ಮುದ್ರಣವನ್ನು ಪ್ರಾರಂಭಿಸಲು ಯೋಜಿಸಲಾಗಿದೆ ಎಂದು ಸಂಕೇಶ್ವರ ಹೇಳಿದರು.
ಅಂದಹಾಗೆ, ಚಿತ್ರದುರ್ಗ ಅವೃತ್ತಿ ವಿಜಯಕರ್ನಾಟಕ ಪತ್ರಿಕೆಯ ಒಂಭತ್ತನೇ ಆವೃತ್ತಿ !

ವಿದೇಶಿ ಬಂಡವಾಳಕ್ಕೆ ಸ್ವಾಗತ
ಮುದ್ರಣ ಮಾಧ್ಯಮದಲ್ಲಿ ಶೇ.26 ರಷ್ಟು ನೇರ ವಿದೇಶಿ ಬಂಡವಾಳಕ್ಕೆ ಅನುವು ಮಾಡಿಕೊಟ್ಟಿರುವ ಕೇಂದ್ರ ಸರ್ಕಾರದ ಕ್ರಮ ಒಂದು ಒಳ್ಳೆಯ ನಿರ್ಧಾರ ಎಂದು ಬಣ್ಣಿಸಿದ ಸಂಕೇಶ್ವರ, ವಿದೇಶಿ ಬಂಡವಾಳ ಹೂಡಿಕೆಯಿಂದಾಗಿ ದೇಶೀ ಪತ್ರಿಕೋದ್ಯಮ ಸಂಸ್ಥೆಗಳು ಲಾಭ ಪಡೆಯಲಿವೆ ಎಂದು ಅಭಿಪ್ರಾಯಪಟ್ಟರು.

ವಿದೇಶಿ ಹೂಡಿಕೆಯ ಮುನ್ನ , ಮುದ್ರಣ ಮಾಧ್ಯಮ ಕ್ಷೇತ್ರದ ಹಿತಾಸಕ್ತಿ ರಕ್ಷಿಸುವ ಎಲ್ಲ ಕ್ರಮಗಳನ್ನೂ ಕೇಂದ್ರ ಸರ್ಕಾರ ಕೈಗೊಳ್ಳಲಿದೆ ಎಂದು ಸಂಕೇಶ್ವರ ಸ್ಪಷ್ಟಪಡಿಸಿದರು.
(ಪಿಟಿಐ)

ವಾರ್ತಾ ಸಂಚಯ
ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X