ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರು ರೇಸ್‌ಕೋರ್ಸ್‌ ಎತ್ತಂಗಡಿ- ಇದು ಕೃಷ್ಣ ಗಾರುಡಿ !

By Staff
|
Google Oneindia Kannada News

ಬೆಂಗಳೂರನ್ನು ಕಾಂಕ್ರೀಟ್‌ ಕಾಡಾಗಲು ಬಿಡುವುದಿಲ್ಲ !
ಇಲ್ಲಿ ಅರಳಲಿವೆ ಉದ್ಯಾನವನಗಳು !!
- ಹೀಗೆ ಘೋಷಿಸಿದ್ದು ಸಿಂಗಪುರನ್ನು ಬೆಂಗಳೂರು ಮಾಡುತ್ತೇನೆ ಎಂದು ಈ ಮುನ್ನ ಘೋಷಿಸಿ ಈಗ ಮನಸ್ಸು ಬದಲಿಸಿಕೊಂಡಿರುವ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ .

ಬೆಂಗಳೂರಿನ ಜಯನಗರ ಬಡಾವಣೆಯ 5 ನೇ ಬ್ಲಾಕ್‌ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ತಾವರೆಕೆರೆ ಮತ್ತು ಜಯನಗರ 5 ನೇ ಬ್ಲಾಕ್‌ ಉದ್ಯಾನವನಗಳನ್ನು ಮಹಾ ನಗರಕ್ಕೆ ಅರ್ಪಿಸಿ ಮಾತನಾಡುತ್ತಿದ್ದ ಕೃಷ್ಣ ಅವರ ಭಾಷಣದ ತುಂಬ ಹಸುರೋ ಹಸುರು.

ನಗರದ ಕೇಂದ್ರಭಾಗದಲ್ಲಿರುವ ರೇಸ್‌ಕೋರ್ಸನ್ನು ಸ್ಥಳಾಂತರ ಮಾಡಲು ಈಗಾಗಲೇ ನಿರ್ಧರಿಸಲಾಗಿದ್ದು , ಈ ಪ್ರದೇಶವನ್ನು ಉದ್ಯಾನವಾಗಿ ಪರಿವರ್ತಿಸಲಾಗುವುದು. ರೇಸ್‌ಕೋರ್ಸ್‌ ಪ್ರದೇಶದಲ್ಲಿ ಯಾವುದೇ ಕಟ್ಟಡಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಳ್ಳುವುದಿಲ್ಲ . ನಗರವನ್ನು ಕಾಂಕ್ರೀಟ್‌ ಕಾಡಾಗಲು ಸರ್ಕಾರ ಬಿಡುವುದಿಲ್ಲ ಎಂದು ಕೃಷ್ಣ ಹೇಳಿದರು.

ಪರಪ್ಪನ ಅಗ್ರಹಾರಕ್ಕೆ ಕೇಂದ್ರ ಕಾರಾಗೃಹ ಸ್ಥಳಾಂತರಗೊಂಡು ಈಗ ಖಾಲಿ ಇರುವ ಕೇಂದ್ರ ಕಾರಾಗೃಹ ಪ್ರದೇಶದಲ್ಲೂ ತೋಟಗಾರಿಕೆ ಇಲಾಖೆ ಉದ್ಯಾನ ನಿರ್ಮಿಸುವುದು. ಬೆಂಗಳೂರನ್ನು ಉದ್ಯಾನವನಗಳ ಅಭಿವೃದ್ಧಿಗೆ ಸರ್ಕಾರ ಭಾರೀ ಪ್ರಮಾಣದ ಸಂಪನ್ಮೂಲ ತೊಡಗಿಸಿದೆ ಎಂದ ಕೃಷ್ಣ - ಉದ್ಯಾನ ನಿರ್ಮಿಸುವುದು ಮುಖ್ಯವಲ್ಲ , ಅವುಗಳನ್ನು ಸಂರಕ್ಷಿಸುವುದು ಮುಖ್ಯ ಎಂದರು. ಉದ್ಯಾನಗಳನ್ನು ಸಂರಕ್ಷಿಸುವುದು ಸಾಮೂಹಿಕ ಜವಾಬ್ದಾರಿಯಾಗಿದ್ದು ಈ ಜವಾಬ್ದಾರಿಯನ್ನು ಪ್ರತಿಯಾಬ್ಬ ನಾಗರೀಕನೂ ನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಕರೆ ನೀಡಿದರು.
(ಇನ್ಫೋ ವಾರ್ತೆ)

ಮುಖಪುಟ / ಕೃಷ್ಣ ಗಾರುಡಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X