ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ 5% ಉದ್ಯೋಗ ಕಟ್ಟಿಟ್ಟಬುತ್ತಿ

By Staff
|
Google Oneindia Kannada News

ಬೆಂಗಳೂರು : ಒಂದರಿಂದ ಹತ್ತನೇ ಇಯತ್ತೆವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದವರು ಈಗ ‘ಅಬ್ಬಾ’ ಅಂತ ನೆಮ್ಮದಿಯ ನಿಟ್ಟುಸಿರಿಡುತ್ತಿದ್ದಾರೆ. ಇನ್ನು ಮುಂದೆ ಎಲ್ಲಾ ಸರ್ಕಾರಿ ಉದ್ಯೋಗಗಳಲ್ಲಿ ಇವರಿಗೆ ಐದು ಪ್ರತಿಶತ ಜಾಗೆ ಕಟ್ಟಿಟ್ಟಬುತ್ತಿ.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬರಗೂರು ರಾಮಚಂದ್ರಪ್ಪ ಮಾಡಿದ ಶಿಫಾರಸ್ಸುಗಳ ಪೈಕಿ ಕನ್ನಡ ಮಾಧ್ಯಮದಲ್ಲಿ ಓದಿದ ನಿರುದ್ಯೋಗಿಗಳ ಕಣ್ಣೀರೊರೆಸುವುದಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಸೋಮವಾರ ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡಿರುವ ಮಹತ್ವದ ನಿರ್ಣಯ ಇದು. ವಾರ್ತಾ ಸಚಿವ ಕಾಗೋಡು ತಿಮ್ಮಪ್ಪ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ಸಂಪುಟ ಸಭೆ ಅನುಮೋದಿಸಿದ ಇನ್ನಿತರ ಪ್ರಮುಖ ಶಿಫಾರಸ್ಸುಗಳು ಇಂತಿವೆ...

  • ಕರ್ನಾಟಕ ಸಾಬೂನು ಮತ್ತು ಮಾರ್ಜಕ (ಕೆಎಸ್‌ ಅಂಡ್‌ ಡಿಎಲ್‌) ನಿಯಮಿತದಿಂದ 74 ಪ್ರತಿಶತ ಬಂಡವಾಳ ಹಿಂದೆಗೆತ.
  • ಇದೇ ಕಂಪನಿಯ 300 ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ನೀಡಲು ಅನುವಾಗುವಂತೆ 7 ಕೋಟಿ ರುಪಾಯಿ ಮಂಜೂರು.
  • ಇಲೆಕ್ಟ್ರಾನಿಕ್‌ ‘ರೇವಾ’ ಕಾರು ಮಾರುಕಟ್ಟೆಗೆ ಇನ್ನಷ್ಟು ಉತ್ತೇಜನ ನೀಡಲು ತೆರಿಗೆ, ಪ್ರವೇಶ ತೆರಿಗೆ, ವಾಣಿಜ್ಯ ತೆರಿಗೆಯಲ್ಲಿನ ಸೋಡಿ ವಿಸ್ತರಣೆ.
  • ಹಂಪಿ ಬಳಿಯ ವಿವಾದಿತ ಆನೆಗೊಂದಿ ಸೇತುವೆಯನ್ನು ನಾಶ ಮಾಡಿ, ಬೇರೆಡೆ ತೂಗು ಸೇತುವೆ ನಿರ್ಮಾಣ.
  • ಬಾಗಿಲು ಮುಚ್ಚಿರುವ ಶಿವಮೊಗ್ಗದ ಮೈಸೂರು ಮ್ಯಾಚಸ್‌ ಕಂಪನಿಯನ್ನು ವಿಸರ್ಜಿಸಿ, ಸ್ವತ್ತನ್ನು ಮಾರಾಟ ಮಾಡವುದು.
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X