ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಘ ಪರಿವಾರದ ಕೈಲಿ ಎನ್‌ಡಿಎ ಜುಟ್ಟು : ಪೂಜಾರಿ ಲೇವಡಿ

By Staff
|
Google Oneindia Kannada News

ಮಂಗಳೂರು : ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಲಗಾಮು ಸಂಘ ಪರಿವಾರದ ಕೈಲಿದೆ ಎಂದು ಕಾಂಗ್ರೆಸ್‌ ನಾಯಕ ಜನಾರ್ಧನ ಪೂಜಾರಿ ಕಟಕಿಯಾಡಿದ್ದಾರೆ.

ಮಂಗಳವಾರ ಸುದ್ದಿಗಾರರೊಡನೆ ಮಾತಾಡಿದ ಪೂಜಾರಿ, ಯಶವಂತ ಸಿನ್ಹ ಹಾಗೂ ಜಸ್ವಂತ್‌ ಸಿಂಗ್‌ ಖಾತೆ ಅದಲಿ ಬದಲಿಯಾದದ್ದೇ ಆರೆಸ್ಸೆಸ್‌ ಮತ್ತು ವಿಎಚ್‌ಪಿಯ ಇಶಾರೆಯ ಮೇರೆಗೆ. ಜೊತೆಗೆ ಬಿಜೆಪಿ ಮಿತ್ರ ಪಕ್ಷಗಳೂ ಯಶವಂತ ಸಿನ್ಹ ಅವರ ಕೆಟ್ಟ ವಿತ್ತ ಯೋಜನೆಗಳ ಕಾರಣ ಅವರ ಎತ್ತಂಗಡಿಗೆ ಒತ್ತಾಯ ಹೇರಿದ್ದವು ಎಂದರು.

ಮುದ್ರಣ ಮಾಧ್ಯಮದಲ್ಲಿ 26 ಪ್ರತಿಶತ ವಿದೇಶೀ ನೇರ ಬಂಡವಾಳ ಹೂಡಿಕೆಗೆ ಕೊಟ್ಟಿರುವ ಅನುಮತಿಯನ್ನು ನಾನು ವಿರೋಧಿಸುತ್ತೇನೆ. ಇವತ್ತು 26, ನಾಳೆ 45, ಬರಬರುತ್ತಾ ನೂರು ಪ್ರತಿಶತ ಬಂಡವಾಳ ಹೂಡಬಹುದು ಅಂತಾರೆ. ಇದು ತರವಲ್ಲ ಎಂದು ಪೂಜಾರಿ ಪ್ರಶ್ನೆಯಾಂದಕ್ಕೆ ಉತ್ತರ ಕೊಟ್ಟರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X