ದೈತ್ಯಟ್ರಕ್ಗಳಿಂದ ಲಗಾಡಿ ಎದ್ದ ಗುಲ್ಬರ್ಗಾ ರಸ್ತೆಗಳಿಗೆ ಖರ್ಗೆ ಕೃಪೆ
ಬೆಂಗಳೂರು : ರಾಯಚೂರಿನಿಂದ ಗುಲ್ಬರ್ಗಾಕ್ಕೆ ಹಾರುಬೂದಿ ಸಾಗಿಸುವ ದೈತ್ಯ ಟ್ರಕ್ಗಳ ಕಾರಣದಿಂದ ಲಗಾಡಿ ಎದ್ದಿರುವ ರಸ್ತೆಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಅಧಿಕೃತ ಸಮಿತಿಯಾಂದನ್ನು ರಚಿಸಲಿದೆ ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸಚಿವ ಧರ್ಮಸಿಂಗ್, ಬಸವರಾಜಪಾಟೀಲ್ ಸೇರಿದಂತೆ ಗುಲ್ಬರ್ಗಾ ಜಿಲ್ಲೆಯ ಮುಖಂಡರೊಡನೆ ಸೋಮವಾರ ಸಭೆ ಸೇರಿ ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ ಈ ವಿಷಯ ಪ್ರಕಟಿಸಿದರು. ಗುಲ್ಬರ್ಗಾ ಜಿಲ್ಲೆಯ ವಾಡಿ, ಸೇಡಂ, ಮಳಖೇಡ ಹಾಗೂ ಶಹಾಬಾದ್ನ ಸಿಮೆಂಟ್ ಕಾರ್ಖಾನೆಗಳು ರಾಯಚೂರಿನಿಂದ ಹಾರುಬೂದಿ ಪಡೆಯುತ್ತಿವೆ ಎಂದು ಅವರು ಹೇಳಿದರು.
15
ರಿಂದ
30
ಟನ್
ತೂಕದ
ಹಾರುಬೂದಿ
ಹೊತ್ತ
ಟ್ರಕ್ಗಳು
ಈ
ರಸ್ತೆಯಲ್ಲಿ
ಸಂಚರಿಸುತ್ತವೆ.
ಆದರೆ,
ಈ
ರಸ್ತೆಗಳ
ಸಾಮರ್ಥ್ಯ
5
ರಿಂದ
9
ಟನ್ಗಳಿಗೆ
ಸೀಮಿತವಾಗಿದೆ.
ಅಧಿಕ
ಒತ್ತಡದಿಂದಾಗಿ
ರಸ್ತೆಗಳು
ವಿಕೃತಿ
ಹೊಂದಿವೆ.
ಈ
ರಸ್ತೆಗಳನ್ನು
ಅಭಿವೃದ್ಧಿ
ಪಡೆಸಲು
ಕನಿಷ್ಠ
40
ಕೋಟಿ
ರುಪಾಯಿ
ಅಗತ್ಯವೆಂದು
ಅಧಿಕಾರಿಗಳು
ಅಂದಾಜು
ಮಾಡಿದ್ದಾರೆ.
ಈ
ಹಣವನ್ನು
ಹುಡ್ಕೋದಿಂದ
ಸಾಲ
ಪಡೆಯಲು
ಯೋಚಿಸಲಾಗುತ್ತಿದೆ
ಎಂದು
ಖರ್ಗೆ
ಹೇಳಿದರು.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...