ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಘಟಪ್ರಭಾ ನದಿಯಲ್ಲಿ ದೋಣಿ ಮಗುಚಿ ಐವರ ಜಲಸಮಾಧಿ

By Oneindia Staff
|
Google Oneindia Kannada News

ಬೆಂಗಳೂರು : ಬಾಗಲಕೋಟೆಯಲ್ಲಿನ ಘಟಪ್ರಭಾ ನದಿಯನ್ನು ದಾಟುವಾಗ ದೋಣಿ ಮಗುಚಿದ ಪರಿಣಾಮವಾಗಿ ಒಬ್ಬ ಬಾಲಕ ಸೇರಿದಂತೆ ಐವರು ಶುಕ್ರವಾರ ಸಂಜೆ ಮುಳುಗಿದ್ದಾರೆಂದು ಪೋಲಿಸರು ಶನಿವಾರ ತಿಳಿಸಿದ್ದಾರೆ.

ದೋಣಿಯಲ್ಲಿದ್ದ ಒಬ್ಬ ಬಾಲಕ ಹಾಗೂ ನಾಲ್ವರು ಮಹಿಳೆಯರು, ಕದಂಪುರ, ಸಿಂದಗಿ ಹಾಗೂ ನಕ್ಕರಗುಂಡಿ ಹಳ್ಳಿಗಳಿಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿತು. ಜಲಸಮಾಧಿಯಾಗಿರುವ ಮಹಿಳೆಯರು 25 ರಿಂದ 50 ವರ್ಷ ವಯೋಮಾನದವರಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.

ದೋಣಿಯಲ್ಲಿದ್ದ ಇತರ ನಾಲ್ವರು ಈಜಿ ದಡ ಸೇರಿದ್ದಾರೆ ಹಾಗೂ ಶವಗಳನ್ನು ಹೊರತೆಗೆಯುವ ಕಾರ್ಯ ಸಾಗಿದೆ.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X