ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಘಟಪ್ರಭಾ ನದಿಯಲ್ಲಿ ದೋಣಿ ಮಗುಚಿ ಐವರ ಜಲಸಮಾಧಿ
ಬೆಂಗಳೂರು : ಬಾಗಲಕೋಟೆಯಲ್ಲಿನ ಘಟಪ್ರಭಾ ನದಿಯನ್ನು ದಾಟುವಾಗ ದೋಣಿ ಮಗುಚಿದ ಪರಿಣಾಮವಾಗಿ ಒಬ್ಬ ಬಾಲಕ ಸೇರಿದಂತೆ ಐವರು ಶುಕ್ರವಾರ ಸಂಜೆ ಮುಳುಗಿದ್ದಾರೆಂದು ಪೋಲಿಸರು ಶನಿವಾರ ತಿಳಿಸಿದ್ದಾರೆ.
ದೋಣಿಯಲ್ಲಿದ್ದ ಒಬ್ಬ ಬಾಲಕ ಹಾಗೂ ನಾಲ್ವರು ಮಹಿಳೆಯರು, ಕದಂಪುರ, ಸಿಂದಗಿ ಹಾಗೂ ನಕ್ಕರಗುಂಡಿ ಹಳ್ಳಿಗಳಿಗೆ ಹೋಗುವಾಗ ಈ ದುರ್ಘಟನೆ ಸಂಭವಿಸಿತು. ಜಲಸಮಾಧಿಯಾಗಿರುವ ಮಹಿಳೆಯರು 25 ರಿಂದ 50 ವರ್ಷ ವಯೋಮಾನದವರಾಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
ದೋಣಿಯಲ್ಲಿದ್ದ ಇತರ ನಾಲ್ವರು ಈಜಿ ದಡ ಸೇರಿದ್ದಾರೆ ಹಾಗೂ ಶವಗಳನ್ನು ಹೊರತೆಗೆಯುವ ಕಾರ್ಯ ಸಾಗಿದೆ.
(ಪಿಟಿಐ)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Saturday, June 29, 2002, 5:30 [IST]