ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ದಕ್ಷತೆಗಾಗಿ ಯುವ ಸಚಿವರು ಬೇಕಾಗಿತ್ತು : ಎಸ್ಸೆಂ ಕೃಷ್ಣ
ಬೆಂಗಳೂರು : ಬಿಸಿ ರಕ್ತದ ಯುವಕರನ್ನು ಸೇರಿಸಿಕೊಳ್ಳುವುದರ ಮೂಲಕ ಸಚಿವ ಸಂಪುಟ ಈಗ ಕಳೆಗಟ್ಟಿದೆ ಎಂದು ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
ಎಲ್ಲಾ ಜಿಲ್ಲೆಗಳಿಗೆ ಪ್ರಾತಿನಿಧ್ಯ ಕೊಟ್ಟಿರುವುದು ಆಡಳಿತದಲ್ಲಿ ದಕ್ಷತೆ ಹೆಚ್ಚಲು ಕಾರಣವಾಗಲಿದೆ. ಸಂಪುಟದಿಂದ ಕೆಲವರನ್ನು ತೆಗೆದು ಹಾಕಿರುವುದು ಅವರ ಕೆಲಸದ ಕಾರಣಕ್ಕಲ್ಲ. ಅವರನ್ನು ಪಕ್ಷದ ಇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದರು.
ಸಂಪುಟ ಪುನರ್ರಚನೆ ಇದೇ ಕೊನೆಯೇ ಎಂಬ ಪ್ರಶ್ನೆಗೆ, ಇದೊಂದು ನಿರಂತರ ಪ್ರಕ್ರಿಯೆ. ಇದೇ ಕೊನೆ ಅಂತ ಹೇಳಲಾಗದು. ಪರಿಸ್ಥಿತಿ ಕೇಳಿದಾಗ, ಪುನರ್ ರಚನೆ ಮಾಡಲೇಬೇಕಾಗುತ್ತದೆ. ಪುನರ್ ರಚಿತ ಸಂಪುಟದಲ್ಲಿ ಕೆಲವು ಸಣ್ಣ ಪುಟ್ಟ ಖಾತೆ ಬದಲಾವಣೆ ಗಳಿರುತ್ತವೆ, ಅಷ್ಟೇ ಎಂದು ಉತ್ತರಿಸಿದರು.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣ
ಗಾರುಡಿ
Comments
Story first published: Thursday, June 27, 2002, 5:30 [IST]