ಕಾವೇರಿ ಬಿಡಲಾಗದು : ಪಿಎಂ ಮನವಿಗೆ ಎಸ್ಸೆಂ ಕೃಷ್ಣ ಉತ್ತರ
ಬೆಂಗಳೂರು : ತಮಿಳುನಾಡಿಗೆ ಸದ್ಯಕ್ಕೆ ಕಾವೇರಿ ನದಿ ನೀರು ಬಿಡುವ ಸ್ಥಿತಿಯಲ್ಲಿ ಕರ್ನಾಟಕ ಇಲ್ಲ ಎಂಬುದನ್ನು ಪ್ರಧಾನಿ ಎ.ಬಿ.ವಾಜಪೇಯಿ ಅವರಿಗೆ ಮನವರಿಕೆ ಮಾಡಿಸುವುದಾಗಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದ್ದಾರೆ.
ಸಚಿವ ಸಂಪುಟ ಪುನರ್ ರಚನೆಯ ನಂತರ ಬುಧವಾರ ಸಂಪುಟ ಸಭೆ ನಡೆಸಿದ ಕೃಷ್ಣ ಈ ತೀರ್ಮಾನ ಕೈಗೊಂಡಿದ್ದಾರೆ. ಸಭೆಯ ನಂತರ ಸುದ್ದಿಗಾರರ ಪ್ರಶ್ನೆಗಳಿಗೆ ಅವರು ಉತ್ತರ ಕೊಟ್ಟರು. ತಮಿಳುನಾಡಿನ ನೀರಿನ ಬವಣೆ ಪರಾಕಾಷ್ಠೆ ಮುಟ್ಟಿರುವುದರಿಂದ 3 ಟಿಎಂಸಿ ಕಾವೇರಿ ನೀರನ್ನು ಬಿಡುವಂತೆ ಕೃಷ್ಣ ಅವರಲ್ಲಿ ಫೋನಿನ ಮೂಲಕ ಮಂಗಳವಾರ ಪ್ರಧಾನಿ ವಾಜಪೇಯಿ ಮನವಿ ಮಾಡಿದ್ದರು.
ಮೊನ್ನೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪತ್ರ ಬರೆದಾಗ ಜಲಾಶಯಗಳಲ್ಲಿ ಯಾವ ಮಟ್ಟದಲ್ಲಿ ನೀರಿತ್ತೋ, ಇಂದೂ ಸ್ಥಿತಿ ಹಾಗೆಯೇ ಇದೆ. ಕಬಿನಿ, ಕೆಆರ್ಎಸ್ ಮತ್ತು ಗೊರೂರು ಜಲಾಶಯಗಳಿಗೆ ನೀರಿನ ಒಳ ಹರಿವು ಹೆಚ್ಚಾಗಿಲ್ಲ. ಇಂಥಾ ಪರಿಸ್ಥಿತಿಯಲ್ಲಿ ಕರ್ನಾಟಕವೇ ಸಂಕಷ್ಟದಲ್ಲಿದೆ. ಪ್ರಧಾನಿ ವಾಜಪೇಯಿ ಅವರಿಗೆ ಇಂದೇ (ಬುಧವಾರ) ನಮ್ಮ ಕಷ್ಟವನ್ನು ಹೇಳಿಕೊಳ್ಳುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಕೃಷ್ಣ ಹೇಳಿದರು.
(ಪಿಟಿಐ)
ಕಾವೇರಮ್ಮ
ಕಾಪಾಡಮ್ಮ...!
ಮುಖಪುಟ
/
ಕೃಷ್ಣ
ಗಾರುಡಿ