ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀದರ್ನಲ್ಲಿ ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಆರೋಪಿ
ಬೀದರ್: ಬಂಗಾರ ಶುಭ್ರಗೊಳಿಸುವುದಾಗಿ ಹೇಳಿ ಗ್ರಾಹಕರನ್ನು ವಂಚಿಸುತ್ತಿದ್ದ ಅಂತರರಾಜ್ಯ ತಂಡದ ಸದಸ್ಯನೊಬ್ಬನನ್ನು ಬಂಧಿಸಿದಾಗ, ಆತ ಸಯನೈಡ್ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು ವರದಿಯಾಗಿದೆ.
ಬೀದರ್ ನಗರ ವ್ಯಾಪ್ತಿಯ ಪೊಲೀಸರು ಸಂಜೀವ ಕುಮಾರ್(23) ಎಂಬಾತನನ್ನು ವಂಚನೆಯ ಆರೋಪದ ಮೇಲೆ ಮಂಗಳವಾರ ಬಂಧಿಸಿದ್ದರು. ಬೀದರ್ ಮಾರ್ಕೆಟ್ ವೃತ್ತ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸುತ್ತಿದ್ದಾಗ ಈತ ಸಯನೈಡ್ ಸೇವಿಸಿದ. ಆರೋಪಿಯನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆಗೆ ಆತ ಕೊನೆಯುಸಿರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂತರರಾಜ್ಯ ಆಭರಣ ವಂಚಕ ಜಾಲದ ಪ್ರಮುಖ ಆರೋಪಿಯಾಗಿದ್ದ ಈತ ವಿಚಾರಣೆ ಮಧ್ಯದಲ್ಲಿ ತನ್ನ ಬಳಿಯಿದ್ದ ಡಬ್ಬವೊಂದರಿಂದ ಸಯನೈಡ್ ಹೊರತೆಗೆದು ತಾಮ್ರವೊಂದಕ್ಕೆ ಲೇಪಿಸಿ ದ್ರವವನ್ನು ಬಾಯಿಗೆ ಹಾಕಿದ ಎಂದು ಪೊಲೀಸರು ಹೇಳಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...
Story first published: Thursday, June 27, 2002, 5:30 [IST]