ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಂಚಿಯ ಶ್ರೀ ಜಯೇಂದ್ರ ಸರಸ್ವತಿ ಸ್ವಾಮಿಗೆಕೊಲೆ ಬೆದರಿಕೆ ಪತ್ರ
ಕಂಚೀಪುರಂ : ರಾಮಜನ್ಮಭೂಮಿ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಶ್ರಮಿಸುತ್ತಿರುವ ಕಂಚಿ ಮಠಾಧೀಶ ಶ್ರೀ ಜಯೇಂದ್ರ ಸರಸ್ವತಿ ಅವರಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ.
ಗುರುವಾರ (ಜೂ.27) ತಿರುನಲ್ವೇಲಿಯ ಅರುಣಾಚಲೇಶ್ವರ ದೇವಸ್ಥಾನದಲ್ಲಿ ನಡೆಯುವ ಕುಂಭಾಭಿಷೇಕದಲ್ಲಿ ಶ್ರೀಗಳನ್ನು ಕೊಲ್ಲುವುದಾಗಿ ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ. ಬೆದರಿಕೆ ಪತ್ರದ ಕಾರಣದಿಂದಾಗಿ ಕಂಚಿ ಮಠಕ್ಕೆ ಒದಗಿಸಿರುವ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ.
ಬೆದರಿಕೆ
ಪತ್ರದ
ಕೊನೆಗೆ
ಇಮಾಮ್
ಆಲಿ
ಸಹಚರರು
ಎಂದು
ಸಹಿ
ಮಾಡಲಾಗಿದೆ.
ಕೆಲವು
ತಿಂಗಳ
ಹಿಂದೆ
ಪೊಲೀಸ್
ಕಸ್ಟಡಿಯಿಂದ
ಪರಾರಿಯಾದ
ಇಮಾಮ್
ಆಲಿಯೇ
ಈ
ಪತ್ರದ
ಹಿಂದಿರಬಹುದು
ಎಂದು
ಪೊಲೀಸರು
ಶಂಕಿಸಿದ್ದಾರೆ.
ಪ್ರಸ್ತುತ
ಸ್ವಾಮೀಜಿಗೆ
ಝಡ್
ಕೆಟಗರಿ
ರಕ್ಷಣೆ
ಒದಗಿಸಲಾಗಿದೆ.
(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...
Comments
Story first published: Wednesday, June 26, 2002, 5:30 [IST]