For Daily Alerts
ಜಯಾ ಪರ ಅಟಲ್ ವಕಾಲತ್ತು : ‘ತಮಿಳುನಾಡಿಗೆ ನೀರು ಬಿಡಿ’
ನವ ದೆಹಲಿ : ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕ ಹಾಗೂ ತಮಿಳು ನಾಡು ರಾಜ್ಯಗಳ ಮಧ್ಯೆ ತೀವ್ರ ವಿವಾದ ಹಿನ್ನೆಲೆಯಲ್ಲಿ ಇಂದು ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮಧ್ಯ ಪ್ರವೇಶಿಸಿ, ಕರ್ನಾಟಕದ ಮುಖ್ಯಮಂತ್ರಿ ಎಸ್ಸೆಂ ಕೃಷ್ಣ ಅವರಲ್ಲಿ ತಮಿಳು ನಾಡಿಗೆ ಮೂರು ಟಿಎಂಸಿ ಕಾವೇರಿ ನದಿ ನೀರನ್ನು ಬಿಡುವಂತೆ ಕೋರಿದ್ದಾರೆ.
ಪ್ರಧಾನಿ ವಾಜಪೇಯಿ ಎಸ್. ಎಂ. ಕೃಷ್ಣ ಅವರಿಗೆ ಫೋನಾಯಾಸಿ, ತಮಿಳು ನಾಡಿನ ಜನರ ಹಿತದೃಷ್ಟಿ ನೀರು ಬಿಡುವಂತೆ ಕೇಳಿಕೊಂಡಿದ್ದಾರೆಂದು ಪ್ರಧಾನಿ ಕಚೇರಿಯ ಮೂಲಗಳು ತಿಳಿಸಿವೆ. ಮೂರು ಟಿಎಂಸಿ ನದಿ ನೀರನ್ನು ತಮಿಳು ನಾಡಿಗೆ ಬಿಡುವುದರ ಮೂಲಕ ಅಲ್ಲಿನ ಜನರ ನೀರಿನ ಬವಣೆಯನ್ನು ನೀಗಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.
ಮುಂಗಾರು ವಿಫಲವಾದುದರಿಂದ ಕರ್ನಾಟಕ್ಕೇ ನೀರಿಲ್ಲದಿರುವುದರಿಂದ ತಮಿಳು ನಾಡಿಗೆ ನೀರು ಬಿಡಲು ಸಾಧ್ಯವಿಲ್ಲವೆಂದು ಕೃಷ್ಣ ಈ ಹಿಂದೆ ಹೇಳಿರುವುದನ್ನು ಸ್ಮರಿಸಬಹುದು.
(ಪಿ.ಟಿ.ಐ)
ಕಾವೇರಿಯನು
ಹರಿಯಲು
ಬಿಡದೆ...
ಮುಖಪುಟ
/
ಕೃಷ್ಣ
ಗಾರುಡಿ
Story first published: Wednesday, June 26, 2002, 5:30 [IST]