ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಪ ಕೃಷ್ಣ ಕುಮಾರ್‌! ಮಧುಚಂದ್ರ ಮಂಟಪದಿ ಅಲ್ಲೋಲಕಲ್ಲೋಲ

By Staff
|
Google Oneindia Kannada News

‘ನೇನು ಇಸ್ತುನ್ನ ಮೊದಟಿ ಶಾಕ್‌ ! ’
- ಇದು ಸ್ನಾನ ಮಾಡುತ್ತಿದ್ದ ಗಂಡನ ಬಚ್ಚಲಲ್ಲಿಯೇ ಕೂಡಿ ಪರಾರಿಯಾಗಿರುವ ಸತೀಮಣಿ ಬರೆದಿಟ್ಟು ಹೋದ ಪತ್ರ.

ಆಂಧ್ರಪ್ರದೇಶದ ವಾರಂಗಲ್‌ನ ಕೃಷ್ಣಕುಮಾರ್‌(25) ಹಾಗೂ ಶಿರಿಶ(20) ಮದುವೆಯಾಗಿ ತಿಂಗಳಾಗಿದೆ. ದಂಪತಿಗಳಿಬ್ಬರೂ ಮಧುಚಂದ್ರಕ್ಕೆಂದು ಊಟಿಗೆ ಬಂದಿದ್ದರು. ಶಿರಿಶ ಪಾಲಿಗೆ ಕೃಷ್ಣಕುಮಾರ್‌ ಒಲ್ಲದ ಗಂಡ. ಊಟಿಯಲ್ಲೇ ಆಕೆ ಪರಾರಿಯಾಗಲು ಯತ್ನಿಸಿದ್ದಳಂತೆ. ಆದರೆ ಕೃಷ್ಣಕುಮಾರ್‌ದು ಹದ್ದಿನ ಕಣ್ಣು .

ಹಾಗೂ ಹೀಗೂ ಊಟಿಯಿಂದ ಬೆಂಗಳೂರಿಗೆ ಬಂದ ದಂಪತಿಗಳು ತಂಗಿದ್ದು ಶ್ರೀನಾಥ್‌ ಲಾಡ್ಜ್‌ನಲ್ಲಿ . ಭಾನುವಾರ (ಜೂ.23) ಬೆಳಗ್ಗೆ ಕೃಷ್ಣಕುಮಾರ್‌ ಸ್ನಾನ ಮಾಡುತ್ತಿದ್ದ . ಊಟಿಯ ನೆನಪುಗಳು ಮರುಕಳಿಸಿದವೇನೋ, ಸ್ನಾನ ತುಸು ದೀರ್ಘವೇ ಆಯಿತು. ಗಂಡ ಸ್ನಾನ ಮಾಡುತ್ತಿದ್ದರೆ, ಶಿರಿಶ ಆತನ ಬಚ್ಚಲಲ್ಲಿಯೇ ಕೂಡಿ ಬಟ್ಟೆ ಬರೆ ಒಡವೆಗಳೊಂದಿಗೆ ರೂಮ್‌ಗೆ ಬೀಗ ಹಾಕಿ ಪರಾರಿಯಾದಳು.

ಕೃಷ್ಣಕುಮಾರ್‌ ಕಿರುಚಾಟ ಕೇಳಿ ಬಂದ ಹೊಟೇಲ್‌ ಸಿಬ್ಬಂದಿ ನಕಲಿ ಕೀ ಬಳಸಿ ಆತನ ಬಂಧಮುಕ್ತಗೊಳಿಸಿದರು. ಸ್ನಾನದ ಮನೆಯಿಂದ ಹೊರಗೆ ಬಂದ ಕೃಷ್ಣಕುಮಾರ್‌ನ ಸ್ವಾಗತಿಸಿದ್ದು - ‘ನೇನು ಇಸ್ತುನ್ನ ಮೊದಟಿ ಶಾಕ್‌’ (ನಾನು ನೀಡುತ್ತಿರುವ ಮೊದಲ ಷಾಕ್‌)ಎಂದು ಶಿರಿಶ ಬರೆದಿದ್ದ ಪತ್ರ.

ತನ್ನ ಹೆಂಡತಿ ಓಡಿಹೋಗಿರುವ ಕುರಿತು ಕೃಷ್ಣಕುಮಾರ್‌ ಚಿಕ್ಕಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪೊಲೀಸರು ಹುಡುಕುವ ಮುನ್ನವೇ ಆಕೆ ಹಿಂದಿರುಗಿದರೂ ಆಶ್ಚರ್ಯವಿಲ್ಲ . ಪತ್ರದಲ್ಲಿ - ಇದು ಮೊದಲ ಷಾಕ್‌ ಎಂದು ಬರೆದಿದ್ದಾಳೆ. ಅಂದರೆ ಇನ್ನೂ ಷಾಕ್‌ಗಳ ಸ್ಟಾಕ್‌ ಇದೆ ಎಂದಾಯಿತು. ಪಾಪ ಕೃಷ್ಣಕುಮಾರ್‌!!
(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X