ದ್ವಿಚಕ್ರ ವಾಹನ ಚಾಲಕರಿಗೆ ಶಿರೋಭಾರ ಹೊರಿಸಲು ಸಾಂಗ್ಲಿಯಾನ ಸಜ್ಜು
ಬೆಂಗಳೂರುದ್ವಿಚಕ್ರ ವಾಹನ ಸವಾರರು ಕಡ್ಡಾಯ ಹೆಲ್ಮೆಟ್ ಧರಿಸುವ ನಿಯಮವನ್ನು ಬೆಂಗಳೂರಿನಲ್ಲಿ ಮತ್ತೆ ಜಾರಿ ಮಾಡುವ ಇಂಗಿತವನ್ನು ನಗರ ಪೊಲೀಸ್ ಕಮೀಷನರ್ ಎಚ್.ಟಿ.ಸಾಂಗ್ಲಿಯಾನ ವ್ಯಕ್ತಪಡಿಸಿದ್ದಾರೆ.
ಹೆಲ್ಮೆಟ್ ಕಡ್ಡಾಯ ನಿಯಮ ಜಾರಿ ಕುರಿತಾದ ಪ್ರಸ್ತಾವನೆ ಈಗಾಗಲೇ ಸರ್ಕಾರದ ಮುಂದಿದ್ದು , ಅದಕ್ಕೆ ಅಂಗೀಕಾರ ದೊರೆತ ಕೂಡಲೇ ಹೆಲ್ಮೆಟ್ ಕಡ್ಡಾಯ ಕಾನೂನು ಜಾರಿ ಮಾಡಲಾಗುವುದು ಎಂದು ಭಾನುವಾರ ಜೆಂಟ್ಸ್ ಗ್ರೂಪ್ ಆಫ್ ಗಾರ್ಡನ್ ಸಿಟಿ ಏರ್ಪಡಿಸಿದ್ದ ‘ಬೆಂಗಳೂರು ಸಾರಿಗೆ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ಸಾಂಗ್ಲಿಯಾನ ತಿಳಿಸಿದರು.
ಸುಶಿಕ್ಷಿತರೇ ಸಂಚಾರ ನಿಯಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಉಲ್ಲಂಘಿಸುತ್ತಿದ್ದಾರೆ ಎಂದು ವಿಷಾದಿಸಿದ ಸಾಂಗ್ಲಿಯಾನ, ಹೆಲ್ಮೆಟ್ ಧರಿಸುವುದರಿಂದ ಪ್ರಾಣಾಪಾಯ ತಡೆಗಟ್ಟುವ ಸಾಧ್ಯತೆಗಳು ಹೆಚ್ಚಿರುತ್ತವೆ ಎಂದರು. ಶನಿವಾರ (ಜೂ.22) ಬೆಂಗಳೂರಿನಲ್ಲಿ ಕೈಗೊಂಡಿದ್ದ ಸಾರಿಗೆ ತಪಾಸಣೆ ಸಂದರ್ಭದಲ್ಲಿ 5 ಸಾವಿರ ವಾಹನ ಮಾಲಿಕರಿಗೆ ದಂಡ ವಿಧಿಸಿರುವ ವಿಷಯವನ್ನು ಅವರು ತಿಳಿಸಿದರು.
ವಿಚಾರ
ಸಂಕಿರಣದಲ್ಲಿ
ಮಾತನಾಡಿದ
ಎಂ.ಎಸ್.ಆರ್.ತಾಂತ್ರಿಕ
ವಿದ್ಯಾಲಯದ
ಅನುಭವಿ
ಸಂಚಾರ
ಪರಿಣತ
ಎಂ.ಎನ್.ಶ್ರೀಹರಿ
ಅವರು,
ಹೆಲ್ಮೆಟ್
ಬಳಕೆಯಿಂದ
ಶೇ.70
ಮರಣದ
ಪ್ರಮಾಣ
ತಗ್ಗಿಸಬಹುದು
ಎಂದರು.
ವಾಹನ
ಚಾಲನೆ
ಸಂದರ್ಭದಲ್ಲಿ
ಮಾನಸಿಕ
ಸ್ಥಿಮಿತ
ಕಳೆದುಕೊಳ್ಳುವುದರಿಂದ
ಹೆಚ್ಚಿನ
ಅಪಘಾತ
ಸಂಭವಿಸುತ್ತವೆ.
ಕಳೆದ
6
ತಿಂಗಳಲ್ಲಿ
24
ಸಾಫ್ಟ್ವೇರ್
ತಜ್ಞರು
ಪ್ರತ್ಯೇಕ
ಅಪಘಾತಗಳಲ್ಲಿ
ನಿಧನರಾಗಿದ್ದಾರೆ
ಎಂದು
ಶ್ರೀಹರಿ
ಆತಂಕ
ವ್ಯಕ್ತಪಡಿಸಿದರು.
(ಇನ್ಫೋ
ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...