ನೀರಿನ ಬಾಕಿ ಉಳಿಸಿಕೊಂಡಿಲ್ಲ :ಜಯಾಗೆ ಎಸ್.ಎಂ.ಕೃಷ್ಣ ಪತ್ರ
ಬೆಂಗಳೂರು : ಕರ್ನಾಟಕದಲ್ಲಿ ಮಳೆಯ ಕೊರತೆಯಿದ್ದರೂ ತಮಿಳುನಾಡಿಗೆ ಬಿಡುಗಡೆ ಮಾಡುವ ನೀರಿನ ಪ್ರಮಾಣದಲ್ಲಿ ಯಾವುದೇ ಕೊರತೆ ಉಂಟಾಗಿಲ್ಲ ಎಂದು ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಪತ್ರಮುಖೇನ ತಿಳಿಸಿದ್ದಾರೆ.
2001-02 ನೇ ಇಸವಿಯಲ್ಲಿ ಕರ್ನಾಟಕ ನಿಗದಿತ ಪ್ರಮಾಣದ ನೀರನ್ನು ತಮಿಳುನಾಡಿಗೆ ಹರಿಬಿಟ್ಟಿದೆ. ಮೆಟ್ಟೂರು ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದ್ದಾಗ್ಯೂ ತಮಿಳುನಾಡಿಗೆ ನೀರು ಬಿಡಲಾಗಿದೆ. 2002 ರ ಮೇ ತಿಂಗಳ ವೇಳೆಗೆ ಕರ್ನಾಟಕದ ಜಲಾಶಗಳಲ್ಲಿ 9.17 ಟಿಎಂಸಿ ನೀರಿನ ಸಂಗ್ರಹವಿದ್ದರೆ, ಮೆಟ್ಟೂರು ಜಲಾಶಯದಲ್ಲಿ 11.36 ಟಿಎಂಸಿ ನೀರು ಸಂಗ್ರಹವಾಗಿದೆ ಎಂದು ಕೃಷ್ಣ ಪತ್ರದಲ್ಲಿ ಅಂಕಿ ಅಂಶಗಳನ್ನು ಹೆಕ್ಕಿದ್ದಾರೆ.
2002 ಜೂನ್ 1 ರಿಂದ ಜಾರಿಗೆ ಬಂದ ಹೊಸ ವರ್ಷದ ಸಂದರ್ಭದಲ್ಲಿ ಕರ್ನಾಟಕ ಕಳೆದ ವರ್ಷದ ಯಾವುದೇ ರೀತಿಯ ನೀರಿನ ಬಾಕಿ ಉಳಿಸಿಕೊಂಡಿಲ್ಲ . ಕರ್ನಾಟಕ ತೀವ್ರ ಬರದ ದವಡೆಗೆ ತುತ್ತಾಗಿದ್ದರೂ, ತಮಿಳುನಾಡಿನಲ್ಲಿನ ಬೆಳೆಗಳಿಗೆ ನೀರಿನ ತೊಂದರೆ ಎದುರಾಗಿಲ್ಲ . ತಮಿಳುನಾಡು ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ ಪ್ರಸ್ತುತ ಕೂಡ ಮೆಟ್ಟೂರು ಜಲಾಶಯಕ್ಕೆ 59 ಟಿಎಂಸಿ ನೀರು ಹರಿದುಬಂದಿದೆ.
ಕೇರಳ
ಜಲಾನಯನ
ಪ್ರದೇಶದಲ್ಲಿ
ನೀರಿನ
ಹರಿವು
ಕಡಿಮೆಯಿದ್ದು
,
ಕರ್ನಾಟಕದ
ಜಲಾಶಗಳಿಗೆ
4
ಟಿಎಂಸಿಯಷ್ಟು
ನೀರು
ಹರಿದುಬಂದಿದೆ.
ಅದರಲ್ಲಿ
2.08
ಟಿಎಂಸಿ
ನೀರು
ಬಿಳಿಗುಂಡ್ಲು
ಜಲಾಶಯಕ್ಕೆ
ಹರಿದುಬಂದಿದ್ದು
,
ಅಲ್ಲಿಂದ
ಮೆಟ್ಟೂರಿಗೆ
ನೀರು
ಹರಿದಿದೆ
ಎಂದು
ಕೃಷ್ಣ
ಪತ್ರದಲ್ಲಿ
ಸ್ಪಷ್ಟಪಡಿಸಿದ್ದಾರೆ.
(ಪಿಟಿಐ)
ವಾರ್ತಾ
ಸಂಚಯ
ಮುಖಪುಟ
/
ಕೃಷ್ಣ
ಗಾರುಡಿ