ಶ್ರೀನಾಥ್ ಈಗಲೇ ರಿಟೈರ್ಡ್ ಆಗಬಾರದಿತ್ತು : ಕಪಿಲ್ ದೇವ್
ಬೆಂಗಳೂರು: ಜಾವಗಲ್ ಶ್ರೀನಾಥ್ ಆತುರ ಪಟ್ಟರು ಅನಿಸುತ್ತೆ. ಇನ್ನೂ ಕನಿಷ್ಠ ಎರಡು ವರ್ಷ ಆರಾಮಾಗಿ ಅವರು ಟೆಸ್ಟ್ ಆಡಬಹುದಿತ್ತು. ಅವರು ಒಳ್ಳೆಯ ಫಾರ್ಮ್ನಲ್ಲೂ ಇದ್ದರು ಎಂದು ಮಾಜಿ ಕ್ರಿಕೆಟ್ ತಾರೆ ಕಪಿಲ್ ದೇವ್ ಅಭಿಪ್ರಾಯ ಪಟ್ಟಿದ್ದಾರೆ.
ಮುಂದಿನ ವರ್ಷ ದಕ್ಷಿಣ ಆಫ್ರಿಕದಲ್ಲಿ ನಡೆಯಲಿರುವ ವಿಶ್ವ ಕಪ್ ಕ್ರಿಕೆಟ್ ನೇರ ಪ್ರಸಾರದ ಹಕ್ಕು ಸೋನಿ ಎಂಟರ್ಟೇನ್ಮೆಂಟ್ ಟೆಲಿವಿಷನ್ಗೆ ಸಿಕ್ಕಿರುವುದನ್ನು ನಗರದಲ್ಲಿ ಬಹಿರಂಗ ಪಡಿಸಿದ ಸಂದರ್ಭದಲ್ಲಿ ಶುಕ್ರವಾರ ಕಪಿಲ್ ಸುದ್ದಿಗಾರರೊಡನೆ ಮಾತಾಡುತ್ತಿದ್ದರು.
ಸೋನಿ ಎಂಟರ್ಟೇನ್ಮೆಂಟ್ನ ಬ್ರಾಂಡ್ ಅಂಬಾಸಿಡರ್ ಕೂಡ ಆಗಿರುವ ಕಪಿಲ್ ಆಡಿದ ಮಾತುಗಳೆಲ್ಲಾ ಇವತ್ತಿನ ಕ್ರಿಕೆಟ್ನ ಸುತ್ತಲೇ ಸುತ್ತಿತು...
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಹಾಕಿಕೊಳ್ಳುವ ಯೋಜನೆಗಳೇನೋ ಚೆನ್ನಾಗಿರುತ್ತವೆ. ಸುಧಾರಣೆಗೆ ಅದರ ತುಡಿತವೂ ಮೆಚ್ಚತಕ್ಕದ್ದೇ. ಆದರೆ ಇಷ್ಟೊಂದು ಕ್ರಿಕೆಟ್ ಆಟದ ನಡುವೆ ತನ್ನ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವುದೇ ಅದಕ್ಕೆ ಕಷ್ಟವಾಗುತ್ತಿದೆ.
ವೇಗದ ಬೌಲರ್ಗಳಿಗೇ ವಿಶೇಷ ತರಪೇತಿ ಕೊಡುವ ಕುರಿತು ಮೊದಲು ಯೋಜನೆ ಹಾಕಿಕೊಂಡಿತು. ನಾನು ತರಪೇತುದಾರನಾಗಬೇಕೆಂದು ಕೆಲವರು ಹೇಳಿದ್ದರು ಕೂಡ. ಆದರೆ ಆ ಯೋಜನೆ ಇನ್ನೂ ಪೇಪರ್ ಮೇಲೆಯೇ ಇದೆ. ಇದು ಉದಾಹರಣೆಯಷ್ಟೆ. ಬಿಸಿಸಿಐನ ಎಷ್ಟೋ ಯೋಜನೆಗಳು ಹೀಗೆಯೇ ಸತ್ತು ಹೋಗುತ್ತಿವೆ !
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...