ಬೆಂಗಳೂರು ನಗರದಲ್ಲಿರುವ ದೇವಸ್ಥಾನಗಳಿಗೆ ಜೀರ್ಣೋದ್ಧಾರ ಭಾಗ್ಯ
ಬೆಂಗಳೂರು: ರಾಜ್ಯ ಸರಕಾರವು ನಗರದಲ್ಲಿರುವ ಎಲ್ಲ ದೇವಸ್ಥಾನಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ನಿರ್ಧರಿಸಿದೆ.
ಬೆಂಗಳೂರು ಮಹಾನಗರದಲ್ಲಿ ಹಲವಾರು ದೇವಸ್ಥಾನಗಳು ಪಾಳು ಬಿದ್ದಿದ್ದು, ಅವುಗಳ ಜೀರ್ಣೋದ್ಧಾರವನ್ನು ಸರಕಾರ ಕೈಗೆತ್ತಿಕೊಳ್ಳಲಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಮುಜರಾಯಿ ಇಲಾಖೆ ಸಚಿವೆ ಸುಮಾ ವಸಂತ್ ತಿಳಿಸಿದರು.
ಬಸವನಗುಡಿ ಕ್ಷೇತ್ರದಲ್ಲಿರುವ ದೇವಸ್ಥಾನಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಸಚಿವೆ, ಹಲವಾರು ದೇವಸ್ಥಾನಗಳ ಗೋಪುರದ ಕಾಮಗಾರಿಗಳು ಅರ್ಧದಲ್ಲಿಯೇ ನಿಂತಿವೆ. ಅವುಗಳನ್ನು ಪೂರ್ಣಗೊಳಿಸಲಾಗುವುದು. ಅಲ್ಲದೆ ದೇವಸ್ಥಾನದ ಸುತ್ತ ಆವರಣ ಗೋಡೆಯನ್ನು ನಿರ್ಮಿಸಿ, ಉದ್ಯಾನವನಗಳನ್ನು ಅಭಿವೃದ್ದಿ ಪಡಿಸುವ ಮೂಲಕ ದೇವಳದ ಆವರಣವನ್ನು ಪರಿಶುದ್ಧವಾಗಿಡಲಾಗುವುದು ಎಂದು ಸುಮಾ ಹೇಳಿದರು.
ದೊಡ್ಡ ಬಸವಣ್ಣ ದೇವಸ್ಥಾನ, ಕಾರಂಜಿ ಆಂಜನೇಯನ ದೇವಸ್ಥಾನ ಮತ್ತು ಹನುಮಾನ್ ದೇವಸ್ಥಾನಗಳಿಗೆ ಮೂಲಭೂತ ಸೌಕರ್ಯಗಳನ್ನು ಆದಷ್ಟು ಬೇಗನೆ ಒದಗಿಸುವುದಾಗಿ ಸಚಿವೆ ಈ ಸಂದರ್ಭದಲ್ಲಿ ಭರವಸೆ ಇತ್ತರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...