ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವರುಣ ದೇವನ ಧರೆಗಿಳಿಸಲು ತಮಿಳುನಾಡಲ್ಲಿ ಗಾರ್ದಭ ಪಾಣಿಗ್ರಹಣ

By Staff
|
Google Oneindia Kannada News

ಮಧುರೈ : ಹುಯ್ಯೋ ಹುಯ್ಯೋ ಮಳೆರಾಯ, ಕತ್ತೆ ಮದುವೆ ಆಗೋಯ್ತು !
ಇಚ್ಚೀಚೆಗೆ ಶಿವಮೊಗ್ಗೆಯ ಚೆನ್ನಗಿರಿಯಲ್ಲಿ ಮಳೆಯಾರನ ಕರೆಯಲು ಹೂತ ಹೆಣವನ್ನೇ ತೆಗೆದು ಸುಟ್ಟರು. ಇವತ್ತಿಗೂ ಕೆಲವು ಬರ ಪೀಡಿತ ಹಳ್ಳಿಗಳಲ್ಲಿ ಮಳೆರಾಯನ ಹೊತ್ತು ಮನೆ ಮನೆಗೆ ಹೋಗಿ, ನೀರು ಹೊಯ್ಯಿಸಿಕೊಂಡು, ಅವನನ್ನು ಒಲಿಸಿ ಕರೆಯುವ ವಾಡಿಕೆಯಿದೆ. ಆದರೆ ಮಳೆಗಾಗಿ ಕತ್ತೆ ಮದುವೆ ಮಾಡಿದವರುಂಟೇ? ಇಲ್ಲಿ ಓದಿ...

ತಮಿಳುನಾಡಿನ ಸಾಕ್ಕಯಾನಯಕನೂರಿನಲ್ಲಿ ಬುಧವಾರ ಎಲ್ಲೆಲ್ಲೂ ಹಸಿರು ತೋರಣ. ಹಳ್ಳಿಯ ಹಬ್ಬದೂಟದ ಘಮಲು. ಅದು ಗಾರ್ದಭ ಪಾಣಿಗ್ರಹಣದ ಸಂಭ್ರಮ ! ಗಂಡು ಕತ್ತೆಗೆ ಹಾಲುಬಿಳಿ ಪಂಚೆ, ಹೆಣ್ಣು ಕತ್ತೆಗೆ ಸೀರೆ ಉಡಿಸೋದು ತ್ರಾಸಾದ್ದರಿಂದ ಅದಕ್ಕೆ ಹೋಲುವ ಸ್ಕರ್ಟು. ದೇವಸ್ಥಾನದ ಮುಂದೆ ಐನೋರ ಮಂತ್ರಘೋಷದ ನಡುವೆ ಸಾಂಪ್ರದಾಯಿಕವಾಗಿ ಈ ಮದುವೆ ನಡೆಯಿತು.

ಆ ಮೇಲೆ ಕತ್ತೆಗಳ ಸಂಸಾರ ಎತ್ತ ಹೋಯಿತೋ ಗೊತ್ತಿಲ್ಲ. ಜನರಂತೂ ಬಾಯಲ್ಲಿ ನೀರೂರಿಸುತ್ತಾ ಮದುವೆ ಊಟವನ್ನು ಹೊಟ್ಟೆತುಂಬಾ ಹೊಡೆದರು.

ಅಸ್ಸಾಂನ ಆದಿವಾಸಿಗಳು ಮುಂಗಾರನ್ನು ಕರೆಯಲು ಪ್ರತಿವರ್ಷ ಕಪ್ಪೆಗಳಿಗೆ ಮದುವೆ ಮಾಡ್ತಾರಂತೆ. ಆಗ ಅವು ವಟಗುಟ್ಟಿ, ವರುಣನನ್ನು ತಮ್ಮದೇ ಆದ ಭಾಷೆಯಲ್ಲಿ ಕರೆಯುತ್ತವಂತೆ. ಹಾಗೆಯೇ ಕತ್ತೆಗಳಿಗೆ ಮದುವೆ ಮಾಡಿದರೂ, ಅವು ವರುಣನನ್ನು ಕರೆಯುತ್ತವೆ ಅನ್ನುವುದು ಸಾಕ್ಕಯಾನಯಕನೂರಿನವರ ನಂಬಿಕೆ.

(ಇನ್ಫೋ ವಾರ್ತೆ)

ವಾರ್ತಾ ಸಂಚಯ
ಮುಖಪುಟ / ಲೋಕೋಭಿನ್ನರುಚಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X