ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಳಗಾವಿ, ಚಿತ್ರದುರ್ಗ, ಮದ್ದೂರಲ್ಲಿ ಆಹಾರ ಸಂಸ್ಕರಣೆ ವಾಸನೆ

By Staff
|
Google Oneindia Kannada News

ಬೆಂಗಳೂರು : ಆಹಾರ ಸಂಸ್ಕರಣೆ ಘಟಕಗಳ ಮೇಲಿನ ಮಾರಾಟ ತೆರಿಗೆಯನ್ನು ರದ್ದುಪಡಿಸಲು ಕರ್ನಾಟಕ ಸರ್ಕಾರ ಚಿಂತಿಸುತ್ತಿದೆ ಎಂದು ಕೇಂದ್ರ ಆಹಾರ ಸಂಸ್ಕರಣೆ ರಾಜ್ಯ ಸಚಿವ ಚಮನ್‌ ಲಾಲ್‌ ಗುಪ್ತ ತಿಳಿಸಿದ್ದಾರೆ.

ರಾಜ್ಯ ಸರ್ಕಾರದ ನೂತನ ಆಹಾರ ಸಂಸ್ಕರಣೆ ನೀತಿಯಡಿ ಆಹಾರ ಸಂಸ್ಕರಣೆ ಘಟಕಗಳ ಮೇಲಿನ ಮಾರಾಟ ತೆರಿಗೆಯನ್ನು ರದ್ದುಪಡಿಸುವ ಕುರಿತು ಕರ್ನಾಟಕ ಸರ್ಕಾರದ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ತಮಗೆ ತಿಳಿಸಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಗುಪ್ತ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಸಚಿವ ದೇಶಪಾಂಡೆ- ಪ್ರಸ್ತುತ ನೂತನ ಆಹಾರ ಸಂಸ್ಕರಣೆ ನೀತಿ ಸಂಪುಟದ ಮುಂದಿದ್ದು , ನೀತಿ ಅಂಗೀಕಾರದ ನಂತರ ಆಹಾರ ಸಂಸ್ಕರಣೆ ಕ್ಷೇತ್ರ ಹೆಚ್ಚಿನ ಅಭಿವೃದ್ಧಿ ಹೊಂದುವುದೆಂದು ಆಶಾ ಭಾವನೆ ವ್ಯಕ್ತಪಡಿಸಿದರು. ಬೆಳಗಾವಿ, ಚಿತ್ರದುರ್ಗ ಹಾಗೂ ಮದ್ದೂರುಗಳಲ್ಲಿ ಆಹಾರ ಸಂಸ್ಕರಣೆ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ ಎಂದರು.

ಬಾಗಲಕೋಟೆ ಹಾಗೂ ಮಾಲೂರುಗಳಲ್ಲಿ ಈಗಾಗಲೇ ಎರಡು ಆಹಾರ ಸಂಸ್ಕರಣೆ ಪಾರ್ಕ್‌ಗಳು ಆರಂಭವಾಗಿದ್ದು , ಜೇವರ್ಗಿಯಲ್ಲಿ ಇನ್ನೊಂದು ಪಾರ್ಕ್‌ ಸ್ಥಾಪಿಸಲಾಗುವುದು ಎಂದೂ ದೇಶಪಾಂಡೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ರಾಜ್ಯದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಬಿ.ಎಸ್‌.ಪಾಟೀಲ್‌, ಪ್ರಸ್ತುತ ಆಹಾರ ಸಂಸ್ಕರಣೆ ಕ್ಷೇತ್ರ ವಾರ್ಷಿಕ 1500 ಕೋಟಿ ರುಪಾಯಿ ರಫ್ತು ಹೊಂದಿದ್ದು , ಈ ಪ್ರಮಾಣವನ್ನು ಮುಂದಿನ 5 ವರ್ಷಗಳಲ್ಲಿ 5 ಸಾವಿರ ಕೋಟಿ ರುಪಾಯಿಗಳಿಗೆ ಮುಟ್ಟಿಸುವ ಗುರಿ ಹೊಂದಲಾಗಿದೆ ಎಂದರು.

(ಪಿಟಿಐ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X